Shrimad Vibhutipura Veera Simhasana Samsthana Matha

Shrimad Vibhutipura Veera Simhasana Samsthana Matha Claimed

ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ

Average Reviews

Description

ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ – ವಿಭೂತಿಪುರ

ಕರ್ತೃ – ಜಗದ್ಗುರು ಶ್ರೀ ರೇವಣಸಿದ್ದರು

ಬೆಂಗಳೂರು ಮಹಾನಗರದ ವಿಭೂತಿಪುರ ಬಡಾವಣೆಯಲ್ಲಿ ಅಸ್ತಿತ್ತ್ವದಲ್ಲಿರುವಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠವು ಸುಮಾರ 12ನೇಶತಮಾನದಲ್ಲಿಯೇ ಜಗದ್ಗುರು ಶ್ರೀ ರೇವಣಸಿದ್ದರಿಂದ ಸ್ಥಾಪಿತಗೊಂಡ ಮಠ ಎಂದುಹೇಳಲಾಗಿದೆ. ದಾಖಲೆಗಳಲ್ಲಿ ವಿಭೂತಿಪುರ ವೀರಸಿಂಹಾಸನವೆಂದೇ ಗುರುತಿಸಲಾಗಿರುವಮಠವನ್ನು ಹಿಂದೆ ‘ಉಪಪಂಚಪೀಠ’ವೆಂದು ಕರೆಯುತ್ತಿದ್ದುದಾಗಿ ತಿಳಿದುಬರುತ್ತದೆ. ಒಂದುಕಾಲಕ್ಕೆ ಇಲ್ಲಿ ಅಣಿಮಾದಿ ಅಷ್ಟಸಿದ್ದಿಗಳನ್ನು ಗಳಿಸಿದ್ದ ಮಹಾಯತಿವರೇಣ್ಯರೂ,ವಿಭೂತಿಪುರುಷರೂ ಇದ್ದುದಕ್ಕಾಗಿಯೇ ಈ ಭಾಗಕ್ಕೆ “ವಿಭೂತಿಪುರ”ವೆಂದು ಹೆಸರುಬಂದುದಾಗಿ ಹೇಳುವುದುಂಟು. ವಿಭೂತಿಪುರ ಮಠದ ಆವರಣದ ಶಾಸನದ ಪ್ರಕಾರ“ಹೊಯ್ಸಳರ ವೀರ ಬಲ್ಲಾಳನ” ಆಳ್ವಿಕೆ (ಕ್ರಿ.ಶ. 1177-1220)ಯಲ್ಲಿ ಪ್ರಮುಖರೆಲ್ಲ ಸೇರಿ ಕ್ರಿ.ಶ.1187ರಲ್ಲಿ ವಾಚ್ಚಿದೇವಪುರವೆಂದು ಊರನ್ನು ಕಟ್ಟಿ ಸುತ್ತಲಿನ ಪ್ರದೇಶವನ್ನೆಲ್ಲಾ ವಾಚ್ಚಿದೇವರುಎಂಬುವವರಿಗೆ ಸರ್ವಮಾನ್ಯವಾಗಿ ನೀಡಿದ್ದರು ಎಂಬುದಾಗಿದೆ. ಈ ರೀತಿಯಾಗಿ ವಿಭೂತಿಪುರವೆಂಬ ಗ್ರಾಮ ಕ್ರಿ.ಶ. 1187ರಲ್ಲಿಯೇವಾಚ್ಚಿದೇವರಪುರವೆಂಬ ಹೆಸರಿನೊಂದಿಗೆ ಅಸ್ತಿತ್ತ್ವದಲ್ಲಿದ್ದು ಈ ಪುರವು ಶೈವಗುರುವೊಬ್ಬರಗೌರವಾನ್ವಿತ ಧಾರ್ಮಿಕ ಕೇಂದ್ರವಾಗಿದ್ದುದು ಸ್ಪಷ್ಟವಾಗಿದೆ. ಈ ಆಧಾರದ ಮೇಲೆ ಹಾಗೂಹಿಂದಿನ ಗುರುಗಳ ಹೇಳಿಕೆಯಂತೆ ಶ್ರೀಮಠವು 12ನೇ ಶತಮಾನದಲೆ ್ಲೀಪ್ರಾರಂಭಗೊಂಡಿತೆಂದು ಹೇಳುತ್ತರಾದರೂ ಸ್ಪಷ್ಟತೆಯಿಲ್ಲ. ಸಿಕ್ಕಿರುವ ದಾಖಲೆಗಳ ಪ್ರಕಾರ1874ರ ವೇಳೆಗೆ ಈ ಮಠದಲ್ಲಿ ಶ್ರೀ ಷ.ಬ್ರ. ಗುರುಸಿದ್ದ ಬಸವರಾಜ ಶಿವಾಚಾರ್ಯರೆಂಬಗುರುಗಳಿದ್ದರು ಎಂದು ತಿಳಿದುಬರುತ್ತದೆ. ಶ್ರೀಮಠವು ಸ್ಥಾಪಿತಗೊಂಡ ಕಾಲದಿಂದ ಈಶ್ರೀಗಳವರೆಗಿನ ಗುರುಪರಂಪರೆ ಲಭ್ಯವಿಲ್ಲ. ಆದ್ದರಿಂದ ಈ ಶ್ರೀಗಳಿಂದ ಮುಂದಿನಗುರುಪರಂಪರೆಯನ್ನು ಗುರುತಿಸಬಹುದಾಗಿದೆ.ಸುಮಾರು 1860 ರಿಂದ 1900ರವರೆಗೆ ಅಧಿಕಾರದಲ್ಲಿದ್ದ ಶ್ರೀ ಗುರುಸಿದ್ದಬಸವರಾಜ ಶಿವಾಚಾರ್ಯರ ನಂತರ 1907ರ ವೇಳೆಗೆ ಶ್ರೀ ಷ.ಬ್ರ. ಸಿದ್ದ ವೃಷಭರಾಜಶಿವಾಚಾರ್ಯ ಸ್ವಾಮಿಗಳು ಅಧಿಕಾರಕ್ಕೆ ಬಂದಿದ್ದಾರೆ. ಇವರು ಎರಡು ದಶಕಗಳಿಗೂ ಅಧಿಕಕಾಲ ಪೀಠಾಧಿಪತಿಗಳಾಗಿ ಶ್ರೀಮಠವನ್ನು ಮುನ್ನಡೆಸಿದ್ದು 1918ರ ಸುಮಾರಿಗೆಬಾಳೆಹೊನ್ನೂರು ಜಗದ್ಗುರುಗಳ ಅಪ್ಪಣೆ ಪಡೆದು ತಮ್ಮ ಶಿಷ್ಯರಾಗಿದ್ದ ಶ್ರೀ ಶಿವರುದ್ರಸ್ವಾಮಿಗಳನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಮುಂದೆ 1927ರಲ್ಲಿ ಶ್ರೀಶಿವರುದ್ರ ಸ್ವಾಮಿಗಳಿಗೆ ಪಟ್ಟಾಧಿಕಾರವಾಗಿದ್ದು 1932ರಲ್ಲಿ ತಮ್ಮ ಸ್ವಇಚ್ಛೆಯಿಂದ ಮಠದಅಧಿಕಾರವನ್ನು ಮೂಲಪೀಠಕ್ಕೆ ವರ್ಗಾಯಿಸಿದ್ದರು.ಮುಂದೆ ಶ್ರೀಮದ್ ರಂಭಾಪುರಿ ಶಿವಾನಂದ ಜಗದ್ಗುರುಗಳು 1934ರ ಮಾರ್ಚ್23ರಂದು ತಮ್ಮ ಶಿಷ್ಯರಾಗಿದ್ದ ಶ್ರೀ ಗಂಗಾಧರ ಶಿವಾಚಾರ್ಯರನ್ನು ಶ್ರೀ ವಿಭೂತಿಪುರ ಮಠಹಾಗೂ ಚಿಕ್ಕಪೇಟೆಯ ಮಹಾಂತರ ಮಠಕ್ಕೂ ಉಭಯ ಮಠಗಳ ಅಧಿಪತಿಗಳನ್ನಾಗಿನೇಮಿಸಿದ್ದರು. ಇವರು ಸುಮಾರು 13 ವರ್ಷಗಳ ಕಾಲ ಶ್ರೀಮಠದ ಅಭಿವೃದ್ದಿಗೆ ಶ್ರಮಿಸಿದ್ದು1947ರ ವೇಳೆಗೆ ರಂಭಾಪುರಿ ಜಗದ್ಗುರುಗಳ ಆದೇಶದ ಮೇರೆಗೆ ಶ್ರೀಮದ್ ರಂಭಾಪುರಿಪೀಠದ ಮುಂದಿನ ಜಗದ್ಗುರುಗಳಾಗಿ ಪೀಠವನ್ನು ಅಲಂಕರಿಸಿದರು. ಇವರು ರಂಭಾಪುರಿಪೀಠದ ಜಗದ್ಗುರುಗಳಾಗಿ ಹೋದ ನಂತರ ಶ್ರೀಮಠವು 7 ವರ್ಷಗಳ ಕಾಲಮಠಾಧಿಪತಿಗಳಿಲ್ಲದೇ ಖಾಲಿ ಉಳಿದಿದ್ದು ಆ ನಂತರ 1954ರಲ್ಲಿ ಶ್ರೀಮಠದ ಅಧಿಪತಿಗಳಾಗಿಬಂದವರೇ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಸುವರ್ಣಲಿಂಗ ಶಿವಾಚಾರ್ಯ ಸ್ವಾಮಿಗಳು.ಸುಧೀರ್ಘ ಐದು ದಶಕಗಳ ಕಾಲ ಶ್ರೀಮಠದ ಅಧಿಕಾರ ನಡೆಸಿದ ಶ್ರೀ ಷ.ಬ್ರ.ಸುವರ್ಣಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠವನ್ನು ಹಂತಹಂತವಾಗಿಅಭಿವೃದ್ದಿಗೊಳಿಸಿದರು. ಮಠದ ಟ್ರಸ್ಟಿಗಳ, ಭಕ್ತರ ಹಾಗೂ ರಂಭಾಪುರಿ ಜಗದ್ಗುರುಗಳಸಹಕಾರದೊಂದಿಗೆ ಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿದ ಶ್ರೀಗಳು ಶ್ರೀಮಠದ ಆಸ್ತಿ-ಪಾಸ್ತಿಯನ್ನು ಉಳಿಸುಕೊಳ್ಳುವಲ್ಲಿ ಬಹುವಾಗಿ ಶ್ರಮಿಸಿದರು. ಗುರುಗಳು ಮಠವನ್ನು ಅಭಿವೃದ್ದಿಪಡಿಸಿ ತಮ್ಮ ಉತ್ತರಾಧಿಕಾರಿಗಳನ್ನಾಗಿ 1996ರ ಮಾರ್ಚ್ 03ರಂದು ಈಗಿನಶ್ರೀಗಳಾದ ಶ್ರೀ ಷ.ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳನ್ನು ಪಟ್ಟಕ್ಕೆತಂದು 2001ರಲ್ಲಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ ಷ.ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯರು ಸಂಸ್ಕøತಎಂ.ಎ. ಪದವಿಯಲ್ಲಿ ಚಿನ್ನದ ಪದಕ ಹಾಗೂ ಪಿ.ಹೆಚ್.ಡಿ. ಪದವಿ ಗಳಿಸಿದವರು. ತಮ್ಮವಿದ್ವತ್ ಪೂರ್ಣ ನಡೆ-ನುಡಿಗಳಿಂದ ಹೆಸರಾಗಿರುವ ಶ್ರೀಗಳು ಕಳೆದ ಎರಡು ದಶಕಗಳಲ್ಲಿಶ್ರೀಮಠದ ಚಿತ್ರಣವನ್ನು ಬದಲಿಸಿದ್ದಾರೆ. ಶ್ರೀಮಠದ ಧಾರ್ಮಿಕ, ಸಾಮಾಜಿಕ ಹಾಗೂಶೈಕ್ಷಣಿಕ ಕಾರ್ಯಚಟುವಿಟಕೆಗಳನ್ನು ವಿಸ್ತರಿಸಿರುವ ಶ್ರೀಗಳು ಅನೇಕ ಕಾರ್ಯಕ್ರಮಗಳಮೂಲಕ ಶ್ರೀಮಠವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ತಮ್ಮ ಆಚರಣೆಗಳಮೂಲಕ ಅಸಂಖ್ಯ ಭಕ್ತರನ್ನು ಸಂಪಾದಿಸಿಕೊಂಡಿರುವ ಶ್ರೀಗಳು ಸಂಸ್ಕಾರಯುತ ಸಮಾಜದಒಳಿತಿಗಾಗಿ ಶ್ರಮಿಸುತ್ತಿದ್ದಾರೆ.ವಿಭೂತಿಪುರ ಮಠದ ಒಳಾಂಗಣದಲ್ಲಿ ಪ್ರಾಚೀನ ಕಾಲದಲ್ಲಿ ನಿರ್ಮಿಸಿರುವ ಶ್ರೀವೀರಭದ್ರಸ್ವಾಮಿ ದೇವಾಲಯವಿದೆ. ಇಲ್ಲಿ ನಿತ್ಯ ತ್ರಿಕಾಲ ಪೂಜೆ, ಪ್ರತಿ ಮಂಗಳವಾರ ವಿಶೇಷಕಾರ್ಯಕ್ರಮಗಳು, ಅಮವಾಸ್ಯೆಗಳಲ್ಲಿ “ಧರ್ಮ ಚಿಂತನ” ಗೋಷ್ಠಿ, ವಿಶೇಷ ಧಾರ್ಮಿಕಆಚರಣೆಗಳು ನಡೆಯುತ್ತವೆ. ಮಠದಲ್ಲಿ 1990ರಲ್ಲಿ ಶ್ರೀ ರೇಣುಕರ ಮೂರ್ತಿಯನ್ನು ಸ್ಥಾಪನೆಮಾಡಲಾಗಿದ್ದು ಮಠದ ಮುಂಭಾಗದಲ್ಲಿ ಪ್ರಾಚೀನ ಬಸವೇಶ್ವರ ಗುಡಿ ಇದೆ. ಕಾರ್ತೀಕಮಾಸದ ಕೊನೆಯ ಸೋಮವಾರ ಶ್ರೀಮಠದ ಜಾತ್ರಾ ಮಹೋತ್ಸವವು ಅದ್ದೂರಿಯಿಂದನಡೆಯುತ್ತಿದ್ದು ಶ್ರಾವಣ ಮಾಸದಲ್ಲಿ “ಮನೆ-ಮನಗಳಲ್ಲಿ ಶಿವಪೂಜೆ” ಎಂಬ ವಿಶಿಷ್ಠಕಾರ್ಯಕ್ರಮ ಆಯೋಜನೆಗೊಳ್ಳುತ್ತದೆ.ಶ್ರೀಮಠದ ಆಶ್ರಯದಲ್ಲಿ ಶ್ರೀ ವೀರಭದ್ರಸ್ವಾಮಿ ಶಿಕ್ಷಣ ಸಂಸ್ಥೆ ಎಂಬ ಶೈಕ್ಷಣಿಕಸಂಸ್ಥೆಯು ನಡೆಯುತ್ತಿದೆ. ಇಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗಿನ ತರಗತಿಗಳುನಡೆಯುತ್ತಿದ್ದು ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ನಿರತರಾಗಿದ್ದಾರೆ. ಶ್ರೀಮಠದಲ್ಲಿವಿದ್ಯಾರ್ಥಿ ನಿಲಯ ಹಾಗೂ ವೃದ್ದಾಶ್ರಮಗಳು ಕಾರ್ಯನಿರ್ವಹಿಸುತ್ತಿದ್ದು ಪ್ರತಿ ವರ್ಷಶ್ರೀಮಠದಿಂದ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ “ಸುವರ್ಣ ಶ್ರೀ”ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ.

Swamiji

Swamiji Name :
ಶ್ರೀ ಷ.ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
01-06-1976
Place :
ಸಂಕನಾಳ, ಬಸವನಬಾಗೇವಾಡಿ ತಾ||
Pattadikara :
03-03-1996
Photo :

Programs

ಪ್ರತಿ ಅಮವಾಸೆಗೆ “ಧರ್ಮ ಚಿಂತನೆ”
ಶ್ರಾವಣ ಮಾಸದಲ್ಲಿ ಮನೆ-ಮನಗಳಲ್ಲಿ ಶಿವಪೂಜೆ ಕಾರ್ಯಕ್ರಮ
ಮತ್ತು ಶಿವಾನುಭವ
ಕಾರ್ತಿಕ ಮಾಸದಲ್ಲಿ ಕೊನೆಯ ಸೋಮವಾರ ಶ್ರೀಮಠದ ಜಾತ್ರೆ
ಪ್ರತಿ ವರ್ಷ ಶ್ರೀ ಮಠದಿಂದ “ಸುವರ್ಣ ಶ್ರೀ” ಪ್ರಶಸ್ತಿ ಪ್ರಧಾನ

Institutions

ಶ್ರೀ ವೀರಭದ್ರೇಶ್ವರ ವಿದ್ಯಾಸಂಸ್ಥೆ
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢಶಾಲೆ
ಪದವಿ ಪೂರ್ವ / ಪದವಿ ಕಾಲೇಜು
ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀಮದ್ ವಿಭೂತಿಪುರ ವೀರಸಿಂಹಾಸನ ಸಂಸ್ಥಾನ ಮಠ
ವಿಭೂತಿಪುರ, ಮಾರತಹಳ್ಳಿ - 560 037
ಬೆಂಗಳೂರು ದಕ್ಷಿಣ ತಾ||, ಬೆಂಗಳೂರು ನಗರ ಜಿಲ್ಲೆ

Map

Near by Places

ಕೆಂ.ಬ.ನಿ. - 16 ಕಿ.ಮೀ.
ರೈಲ್ವೆ ಸ್ಟೇಷನ್ - 16 ಕಿ.ಮೀ.
ಎಂ.ಜಿ.ರಸ್ತೆ - 12 ಕಿ.ಮೀ.
ಯಶವಂತಪುರ - 23 ಕಿ.ಮೀ.

Statistic

573 Views
0 Rating
0 Favorite
0 Share
error: Content is protected !!