Nijagunara Jangama Matha

Nijagunara Jangama Matha Claimed

ಶ್ರೀ ನಿಜಗುಣರ ಜಂಗಮ ಮಠ

Average Reviews

Description

ನಿಜಗುಣರ ಜಂಗಮ ಮಠ

ಕರ್ತೃ – ಶ್ರೀ ಮ.ನಿ.ಪ್ರ. ನಿಜಗುಣ ಮಹಾಸ್ವಾಮಿಗಳು

ಬೆಂಗಳೂರು ನಗರದ ಮಧ್ಯಭಾಗದ ಗವಿಪುರಂ ಬಡಾವಣೆಯಲ್ಲಿಅಸ್ತಿತ್ತ್ವದಲ್ಲಿರುವ ಶ್ರೀ ನಿಜಗುಣರ ಜಂಗಮ ಮಠವು ಕಳೆದೊಂದು ಶತಮಾನದಲ್ಲಿ ಬೆಳೆದುಬಂದ ರೀತಿ ಅನನ್ಯ. ಇದಕ್ಕೆಲ್ಲ ಕಾರಣರಾದವರು ಪರಮ ಪೂಜ್ಯ ಶ್ರೀ ಮ.ನಿ.ಪ್ರ. ನಿಜಗುಣಮಹಾಸ್ವಾಮಿಗಳು. ಕಾಯಕಯೋಗಿಗಳು, ಮಾತೃಹೃದಯಿಗಳು, ನ್ಯಾಯನಿಷ್ಟುರಿ,ದಾಕ್ಷಿಣ್ಯಪರರಲ್ಲದ ಸರಳ ನೇರ ವೈಚಾರಿಕ ನಡವಳಿಕೆಯವರೂ ಆಗಿದ್ದ ಶ್ರೀ ಮ.ನಿ.ಪ್ರ.ನಿಜಗುಣ ಮಹಾಸ್ವಾಮಿಗಳ ಕಾಯಕ ತತ್ತ್ವದಿಂದಾಗಿ ಪ್ರಸಿದ್ದಿಗೊಂಡ ಶ್ರೀಮಠವು ಶ್ರೀನಿಜಗುಣರ ಜಂಗಮ ಮಠವೆಂದೇ ಹೆಸರಾಗಿದೆ.ಪುರಾತನ ಕಾಲದಲ್ಲಿ ಶ್ರೀ ತೋಂಟದ ಸಿದ್ದಲಿಂಗೇಶ್ವರರು ಇದೇ ಸ್ಥಳದಲ್ಲಿಅನುಷ್ಠಾನ ಮಾಡುತ್ತಾ ಕೆಲವಾರು ತಿಂಗಳು ನೆಲೆಸಿದ್ದರೆಂದು ತಿಳಿದು ಬರುತ್ತದೆ. ಗುರುಗಳಅನುಷ್ಠಾನದಿಂದ ಸಾ್ಥಪಿತಗೊಂಡ ಮಠವು ಕಾಲಾನಂತರದಲ್ಲಿ ಸಂಪೂರ್ಣಜೀರ್ಣಗೊಂಡಿದ್ದು ಮಠಾದೀಶರಿಲ್ಲದೇ, ಜನಸಂಚಾರವಿಲ್ಲದೇ ಪಾಳುಬಿದ್ದಿತ್ತು ಎಂದುತಿಳಿದುಬರುತ್ತದೆ. ಈ ಮಠದ ಮೂಲ ಕರ್ತೃಗಳಾದ ಶ್ರೀ ಸಿದ್ದಲಿಂಗೇಶ್ವರ ಮಹಾಸ್ವಾಮಿಗಳಮೂರ್ತಿ ಶ್ರೀ ಮಠದಲ್ಲಿತ್ತಾದರೂ ಅದೂ ಕೂಡ ಮಾವಿನ ಹಲಗೆಯಿಂದ ಮುಚ್ಚಿಹೋಗಿತ್ತು.ಅಲ್ಲಿ ವಾಸ ಮಾಡಲು ಯಾವ ಅನುಕೂಲತೆಯೂ ಇರಲಿಲ್ಲ. ಇಂತಹ ಮಠವನ್ನುಪುನರ್‍ಸ್ಥಾಪಿತಗೊಳಿಸಿ ತಮ್ಮ ಧೈರ್ಯ, ಸಾಹಸಗಳಿಂದಲೇ ಹೆಸರಾದವರು ಶ್ರೀ ನಿಜಗುಣಮಹಾಸ್ವಾಮಿಗಳು.ಶ್ರೀ ನಿಜಗುಣ ಮಹಾಸ್ವಾಮಿಗಳು ದಾವಣಗೆರೆ ಜಿಲ್ಲೆ ಜಗಳೂರು ತಾಲ್ಲೂಕಿನಮೆದನಕೆರೆ ಎಂಬ ಸಣ್ಣ ಗ್ರಾಮದಲ್ಲಿ 1916ರಲ್ಲಿ ಜನಿಸಿದರು. “ಶರಣಯ್ಯ”ನೆಂಬನಾಮದೇಯದೊಂದಿಗೆ ಬಾಲ್ಯ ಕಂಡ ಗುರುಗಳ ತಂದೆ ತಾಯಿಯರು ಮೂರು ವರ್ಷಗಳನಂತರ ಹೊಳಲಕೆರೆಗೆ ಬಂದು ನೆಲೆಸಿದರು. ಕೆಲಕಾಲದ ನಂತರ ಚಿತ್ರದುರ್ಗದ ಶ್ರೀಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೊಳಲ್ಕೆರೆಗೆ ಬಂದಿದ್ದಾಗಅವರ ಕೃಪಾದೃಷ್ಟಿಗೆ ಬಿದ್ದ ಶರಣಯ್ಯನವರನ್ನು ತಮ್ಮ ಗುರುಪುತ್ರರನ್ನಾಗಿ ಮಠಕ್ಕೆಕರೆತಂದರು. ಜಗದ್ಗುರುಗಳ ಮಾರ್ಗದರ್ಶನದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದಶರಣಯ್ಯನವರು ನಂತರ ಅಥಣಿಯ ಗಚ್ಚಿನ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳಮಾರ್ಗದರ್ಶನದಲ್ಲಿ ಸದಾಚಾರ ಸಂಪನ್ನತೆಯ ಮೂರ್ತಿಯಾಗಿ ಬೆಳೆದು ಶ್ರೀ ನಿಜಗುಣದೇವರೆಂಬ ಅಭಿದಾನ ಹೊಂದಿದರು.ಶ್ರೀ ನಿಜಗುಣ ದೇವರು ಪ್ರೌಡಾವಸ್ಥೆಗೆ ಬಂದಾಗ ಕೆಲಕಾಲ ಚಿತ್ರದುರ್ಗಬೃಹನ್ಮಠದ ಆಡಳಿತದಲ್ಲಿ ಕೆಲವು ವಹಿವಾಟುಗಳನ್ನು ನಡೆಸಿ ಜಗದ್ಗುರುಗಳ ಕೃಪೆಗೆಪಾತ್ರರಾದರು. ನಂತರ ಬೆಂಗಳೂರು ಶ್ರೀ ಸರ್ಪಭೂಷಣ ಮಠದ ಕೃಪೆಗೆ ಪಾತ್ರರಾದರು.ನಂತರ ಬೆಂಗಳೂರು ಶ್ರೀ ಸರ್ಪಭೂಷಣ ಮಠದ ಶ್ರೀ ಮಹಾದೇವ ಮಹಾಸ್ವಾಮಿಗಳಸಂಪರ್ಕಕ್ಕೆ ಬಂದು ಅವರ ಮಾರ್ಗದರ್ಶನದಲ್ಲಿ ಪರಿಪಕ್ವಗೊಂಡರು. ಈ ಸಮಯದಲ್ಲಿಯೇ ಬೆಂಗಳೂರು ಭಕ್ತರ ಹಂಬಲ ಹಾಗೂ ಶ್ರೀ ಮಹಾದೇವ ಸ್ವಾಮಿಗಳ ಆಶೀರ್ವಾದದಲ್ಲಿಬಿಡಿಕಾಸೂ ಆದಾಯವಿಲ್ಲದ, ಹಾಳುಬಿದ್ದ ಶ್ರೀಮಠಕ್ಕೆ ಪೀಠಾಧಿಪತಿಗಳಾಗಿ 1938ರಲ್ಲಿ ಶ್ರೀಮ.ನಿ.ಪ್ರ. ನಿಜಗುಣ ಮಹಾಸ್ವಾಮಿಗಳೆಂಬ ಅಭಿದಾನದೊಂದಿಗೆ ಅಧಿಕಾರ ಸ್ವೀಕರಿಸಿದರು.ಈಗ ಗವಿಪುರಂ ಬಡಾವಣೆ ಎಂಬ ಹೆಸರಿನಲ್ಲಿ ಗುರುತಿಸಲ್ಪಡುವ ಈ ಪ್ರದೇಶದಮೊದಲ ಹೆಸರು ಸುಂಕೇನಹಳ್ಳಿ. ಈ ಪ್ರದೇಶವು ಆಗ ಕಾಡು ಪ್ರದೇಶ, ನಿರ್ಜನ ಅರಣ್ಯ,ಜನಸಂಚಾರವಿಲ್ಲ, ರಾತ್ರಿ ಬೆಳಕಿನ ವ್ಯವಸ್ಥೆಯಿಲ್ಲ, ಸಂಪೂರ್ಣ ಬಿದ್ದು ಹೋದ ಮಠ. ಇಂತಹಮಠಕ್ಕೆ ಅಧಿಪತಿಗಳಾದ ಶ್ರೀಗಳು ಕೈಕಟ್ಟಿ ಕೂರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾರನ್ನೂಯಾಚಿಸದೇ ಒಬ್ಬಂಟಿಗರಾಗಿ ಹಠಯೋಗಿಗಳಂತೆ ಶ್ರೀಮಠವನ್ನು ಊರ್ಜಿತಗೊಳಿಸುವಸಂಕಲ್ಪ ಕೈಗೊಂಡರು. ಮಠದ ಅಳಿದುಳಿದ ಜಮೀನನ್ನು ಸುಸ್ಥಿತಿಗೆ ತರಲು ಶ್ರಮಿಸಿದರು.ಕಾಯಕತತ್ತ್ವದಲ್ಲಿ ನಂಬಿಕೆ ಇಟ್ಟಿದ್ದ ಶ್ರೀಗಳು ಕಾಯಕಯೋಗಿಗಳಾಗಿ ಮಠವನ್ನು ಹಂತಹಂತವಾಗಿ ಜೀರ್ಣಾಭಿವೃದ್ದಿಗೊಳಿಸಲು ಪ್ರಾರಂಭಿಸಿದರು.ಶ್ರೀಗಳು ಶ್ರೀಮಠವನ್ನು ಅಭಿವೃದ್ದಿಗೊಳಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಶ್ರೀಮಠದಒಳ-ಹೊರಗಿನ ವಿರೋಧಿಗಳನ್ನೆಲ್ಲಾ ಎದುರಿಸುತ್ತಾ, ಕಾನೂನು ಹೋರಾಟ ನಡೆಸುತ್ತಾ,ದಿನನಿತ್ಯದ ಕಾಯಕ ಮಾಡುತ್ತಾ, ಗೋಸಾಕಾಣಿಕೆ ನಡೆಸುತ್ತಾ ಹೀಗೆ ಹಂತಹಂತವಾಗಿಶ್ರೀಮಠವನ್ನು ಸುಸ್ಥಿತಿಗೆ ತಂದರು. ಸುದೀರ್ಘ ಆರು ದಶಕಗಳ ಹೋರಾಟದಿಂದ ಕಾಡಾಗಿದ್ದಸ್ಥಳವನ್ನು ಒಂದು ಪವಿತ್ರ ಸುಕ್ಷೇತ್ರವನ್ನಾಗಿ ರೂಪಿಸಿದ ಕೀರ್ತಿ ಅವರದು. ಶ್ರೀಮಠದಲ್ಲಿಧಾರ್ಮಿಕ, ಸಾಹಿತ್ಯಿಕ, ಸಾಂಸ್ಕøತಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳನ್ನುನಡೆಸುತ್ತಾ ಶ್ರೀಮಠವನ್ನು ಸಾಂಸ್ಕøತಿಕ ಕೇಂದ್ರವನ್ನಾಗಿ ರೂಪಿಸಿದರು.1974ರಲ್ಲಿ ಬಸವನಗುಡಿಯಲ್ಲಿ “ಶ್ರೀ ನಿಜಗುಣರ ಕಲ್ಯಾಣ ಕ್ಷೇತ್ರ”ವನ್ನುಪ್ರಾರಂಭಿಸಿದ ಶ್ರೀಗಳು 1979ರಲ್ಲಿ ಶ್ರೀಮಠವನ್ನು ಪುನರ್ ನಿರ್ಮಿಸಿದರು. ಈಕಾರ್ಯಕ್ರಮಗಳಿಗೆ ನಾಡಿನಾದ್ಯಂತ ಹರ-ಚರಮೂರ್ತಿಗಳು ಪಾಲ್ಗೊಂಡು ಹರ್ಷಿಸಿದರು.ಶ್ರೀಗಳು ವೀರಶೈವ-ಲಿಂಗಾಯತ ಧರ್ಮದ ಉದ್ದಾರಕ್ಕಾಗಿ ಬಹುವಾಗಿ ಶ್ರಮಿಸಿದರು.ಸಮಾಜದ ಐಕ್ಯತೆಗೆ, ಅದರ ಸಮರಸ ಜೀವನಕ್ಕೆ ಮಠಾದೀಶರುಗಳು ಒಂದಾಗಬೇಕುಎಂದರಿತು ಅದಕ್ಕಾಗಿ ಅಖಿಲ ಕರ್ನಾಟಕ ಮಠಾಧಿಪತಿಗಳ ಸಂಘದ ಪ್ರಧಾನ ಕಛೇರಿಯನ್ನುಶ್ರೀಮಠದಲ್ಲಿಯೇ ಆರಂಭಿಸಿ 1978 ರಿಂದ ಸಂಘದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆಸಲ್ಲಿಸಿದ್ದರು. 1987ರಲ್ಲಿ “ಶೂನ್ಯ ಸಂಪಾದನೆ”ಯ ವಿಚಾರ ಸಂಕಿರಣ ಕಾರ್ಯಕ್ರಮಆಯೋಜಿಸಿದ್ದ ಶ್ರೀಗಳು ನಾಡಿನ ಪ್ರಸಿದ್ದ ವಿದ್ವಾಂಸರು, ಸಂಗೀತ ಕಲಾವಿದರನ್ನು ಆಹ್ವಾನಿಸಿಮೂರುದಿನಗಳ ಕಾಲ ಜ್ಞಾನ ದಾಸೋಹದ ಸುಧೆಯನ್ನು ಹರಿಸಿದ್ದರು.ಶ್ರೀಗಳು ಶ್ರೀಮಠದ ಹಾಗೂ ಸಮಾಜದ ಉದ್ದಾರಕ್ಕಾಗಿ ಕೈಗೊಂಡ ಕಾರ್ಯಗಳುಒಂದೆರಡಲ್ಲ. 1988ರ ಸೆಪ್ಟಂಬರ್‍ನಲ್ಲಿ ಎರಡನೆಯ ಅಖಿಲ ಭಾರತ ಶರಣ ಸಾಹಿತ್ಯಸಮ್ಮೇಳನವನ್ನು ಶ್ರೀಮಠದಲ್ಲಿ ಆಯೋಜಿಸಿದ ಶ್ರೀಗಳು 1989ರ ಏಪ್ರಿಲ್‍ನಲ್ಲಿ ವೀರಶೈವ ತತ್ವಚಿಂತನ ಗೋಷ್ಠಿಯನ್ನು ಆಯೋಜಿಸಿದರು. ಈ ಎಲ್ಲಾ ಕಾರ್ಯಕ್ರಮಗಳ ಮುಖೇ£ ವೀರಶೈವ ಧರ್ಮದ ಪ್ರಚಾರಕ್ಕಾಗಿ ಶ್ರಮಿಸಿದ ಶ್ರೀಗಳ ಶ್ರಮ ಫಲಿಸಿತು. ಅದುವೇ 1990ರಲ್ಲಿಶ್ರೀಮಠದಲ್ಲಿ ನಡೆದ “ಶಿವಯೋಗ ಸಂಪದ” ಎಂಬ ವಿಶೇಷ ಸಮಾವೇಶ, ನಾಡಿನ ಎಲ್ಲಾಪ್ರಮುಖ ಮಠಾದೀಶರನ್ನು ಬರಮಾಡಿಕೊಂಡು “ಶಿವಯೋಗ ಸಂಪದ”ವನ್ನುಸಂಪಾದಿಸಿಕೊಂಡ 1) ನಿಜಗುಣ ಶಿವಯೋಗಿಗಳು, 2) ಸಿದ್ದಲಿಂಗ ಶಿವಯೋಗಿಗಳು 3)ಷಣ್ಮುಖ ಶಿವಯೋಗಿಗಳು 4) ಮುರುಘೇಂದ್ರ ಶಿವಯೋಗಿಗಳು 5) ಬಾಲಲೀಲಾಮಹಾಂತ ಶಿವಯೋಗಿಗಳು 6) ಸರ್ಪಭೂಷಣ ಶಿವಯೋಗಿಗಳ ಕುರಿತಂತೆ, ಅವರುಸಾಧಿಸಿದ ಶಿವಯೋಗ ಸಿದ್ದಿಯ ಮರ್ಮವನ್ನು ಚಿಂತನೆಗೆ ಒಳಪಡಿಸಿದರು. ಇದಾದ ನಂತರ1990ರ ಅಕ್ಟೋಬರ್ ತಿಂಗಳಲ್ಲಿ ಮತ್ತೊಮ್ಮೆ “ವೀರಶೈವ ಸಿದ್ದಾಂತ ಸಂಪದ”ವನ್ನುಏರ್ಪಡಿಸಿದರು.ಶ್ರೀಗಳು ಹಮ್ಮಿಕೊಂಡ ಸಮಾವೇಶಗಳು ಒಂದೆರಡಲ್ಲ. ಸಮಾಜ ಹಾಗೂಧರ್ಮವನ್ನು ಚಿಂತನೆಗೆ ಒಳಪಡಿಸುತ್ತಾ ನಾಡಿನ ಎಲ್ಲಾ ಪೂಜ್ಯರ ವಿಶ್ವಾಸವನ್ನುಸಂಪಾದಿಸಿಕೊಂಡು ಮುನ್ನಡೆದವರು ಶ್ರೀ ಮ.ನಿ.ಪ್ರ. ನಿಜಗುಣ ಮಹಾಸ್ವಾಮಿಗಳು. 1991ರಲ್ಲಿ”ಅನುಭಾವ ಸಪ್ತಾಹ”ವನ್ನು ಆಯೋಜಿಸಿದ್ದ ಶ್ರೀಗಳು ಸಂಪನ್ನಗೊಳಿಸಿದರು. ಇದೊಂದುವಿಶಿಷ್ಟ ಸಪ್ತಾಹ. ಆ ಸಮಯದಲ್ಲಿ “ವೀರಶೈವ ಧರ್ಮ ಗ್ರಂಥ ನಿರ್ಣಯ ವಿಚಾರಕಮ್ಮಟ”ವನ್ನು ಶ್ರೀಗಳು ಸಂಘಟಿಸಿದರು. ಈ ಕಮ್ಮಟದಲ್ಲಿ ಡಾ. ಸಿದ್ದಯ್ಯ ಪುರಾಣಿಕ, ಡಾ.ತಿಪ್ಪೇರುದ್ರಸ್ವಾಮಿ, ಪಂಡಿತ ಚನ್ನಪ್ಪ ಎರೇಸೀಮೆ, ಗೋ.ರು. ಚನ್ನಬಸಪ್ಪ, ಸಾ.ಶಿ.ಮರುಳಯ್ಯ, ಪ್ರೊ. ಬಿ.ವಿರೂಪಾಕ್ಷಪ್ಪ ಮೊದಲಾದವರು ಪಾಲ್ಗೊಂಡು ವಿಚಾರಮಂಥನವನ್ನು ನಡೆಸಿದ್ದರು. ನಂತರ 1992ರಲ್ಲಿ ಪ್ರವಚನ ಸಂಪದವನ್ನು ಹತ್ತುದಿನಗಳ ಕಾಲಪ್ರವಚನವನ್ನು ನಡೆಸಿದ ಶ್ರೀಗಳು 1995ರಲ್ಲಿ ಶ್ರಾವಣ ಮಾಸದ ಒಂದು ತಿಂಗಳ ಕಾಲಪುರಾಣ ಪ್ರವಚನ ಏರ್ಪಡಿಸಿದ್ದರು.ಈ ರೀತಿಯಾಗಿ ತಮ್ಮ ಸಾರ್ಥಕ ಬದುಕನ್ನು ನಡೆಸಿದ ಶ್ರೀಗಳು 1996ರ ಮಾರ್ಚ್08ರಂದು ಈಗಿನ ಶ್ರೀಗಳಾದ ಶ್ರೀ ಮ.ನಿ.ಪ್ರ. ಇಮ್ಮಡಿ ನಿಜಗುಣ ಮಹಾಸ್ವಾಮಿಗಳನ್ನುಶ್ರೀಮಠದ ಪಟ್ಟಾಧಿಕಾರಿಗಳನ್ನಾಗಿ ನೇಮಿಸಿ 1997ರ ಸೆಪ್ಟಂಬರ್ 08ರಂದು ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳು ಗುರುಗಳ ಹಾದಿಯಲ್ಲಿಯೇ ಮುನ್ನಡೆದು ಶ್ರೀಮಠದ ಚಿತ್ರಣವನ್ನೇಸಂಪೂರ್ಣವಾಗಿ ಬದಲಿಸಿದ್ದಾರೆ. 2002ರಲ್ಲಿ ಶ್ರೀ ನಿಜಗುಣರ ಎಜುಕೇಷನ್ಸೊಸೈಟಿಯನ್ನು ಪ್ರಾರಂಭಿಸಿದ ಶ್ರೀಗಳು ಅದರಡಿಯಲ್ಲಿ ಎನ್.ಇ.ಟಿ. ಪಬ್ಲಿಕ್ ಸ್ಕೂಲ್ ಎಂಬಬೃಹತ್ ಶಾಲೆಯನ್ನು ನಡೆಸುತ್ತಿದ್ದಾರೆ. ಈ ಶಾಲೆಯಲ್ಲಿ 1600ಕ್ಕೂ ಅಧಿಕ ವಿದ್ಯಾರ್ಥಿಗಳುವಿದ್ಯಾರ್ಜನೆಗೈಯುತ್ತಿದ್ದಾರೆ. ಶ್ರೀಮಠದಲ್ಲಿ ನಿತ್ಯ ಕಾರ್ಯಕ್ರಮಗಳೊಂದಿಗೆ ಪ್ರತಿ ವರ್ಷಸೆಪ್ಟಂಬರ್ ತಿಂಗಳಲ್ಲಿ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವ ನಡೆಸಲಾಗುತ್ತದೆ.

Swamiji

Swamiji Name :
ಪರಮ ಪೂಜ್ಯ ಲಿಂ. ಶ್ರೀ ಮ.ನಿ.ಪ್ರ. ನಿಜಗುಣ ಮಹಾಸ್ವಾಮಿಗಳು
Photo :

Programs

ಪ್ರತಿ ಹುಣ್ಣಿಮೆ, ಅಮವಾಸ್ಯೆಗೆ ವಿಶೇಷ ಪೂಜೆ ¸
ಸೆಪ್ಟೆಂಬರ್ ತಿಂಗಳಲ್ಲಿ ಕರ್ತೃ ಶ್ರೀ ಮ.ನಿ.ಪ್ರ. ನಿಜಗುಣ ಮಹಾಸ್ವಾಮಿಗಳ ಪುಣ್ಯಾರಾಧನೆ

Institutions

ಶ್ರೀ ನಿಜಗುಣರ ಎಜುಕೇಷನ್ ಸೊಸೈಟೆ
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ / ಪ್ರೌಢಶಾಲೆ

Photos

Full Address Kannada

ಶ್ರೀ ನಿಜಗುಣರ ಜಂಗಮ ಮಠ
ಶ್ರೀ ನಿಜಗುಣ ರೋಡ್, ಗವಿಪುರಂ ಬಡಾವಣೆ,
ಬೆಂಗಳೂರು - 560 019

Map

Near by Places

ಕೆಂ.ಬ.ನಿ. - 3 ಕಿ.ಮೀ.
ಕೆ.ಆರ್.ಮಾರ್ಕೆಟ್ - 3 ಕಿ.ಮೀ.
ರಾಮಕೃಷ್ಣ ಆಶ್ರಮ ಸರ್ಕಲ್ - 200 ಮೀ.

Statistic

68 Views
0 Rating
0 Favorite
0 Share
error: Content is protected !!