ರಾಮನಗರ ಜಿˉÉ್ಲ ಕನಕಪುರ ತಾಲ್ಲೂಕು ಅಜ್ಜ ಬಸವನಹಳ್ಳಿ ಗ್ರಾಮದ ಶ್ರೀ ಗದ್ದುಗೆಮಠವು ಈ ಭಾಗದಲ್ಲಿ ಪ್ರಮುಖ ಮಠಗಳಲ್ಲಿ ಒಂದಾಗಿದ್ದು ಪಂಚಪೀಠಗಳಲ್ಲಿ ಒಂದಾದಶ್ರೀಮದ್ ರಂಭಾಪುರಿ ಪೀಠದ ಶಾಖಾ ಮಠವಾದ ಶ್ರೀ ರಾಜಾಪುರ ವೀರಧರ್ಮಸಿಂಹಾಸನ ಸಂಸ್ಥಾನದ ಶಾಖಾ ಮಠವಾಗಿ ಗುರುತಿಸಿಕೊಂಡಿದೆ. ಶ್ರೀಮಠದಕರ್ತೃಗುರುಗಳಾದ ಶ್ರೀ ಘನಲಿಂಗ ಶಿವಯೋಗಿಗಳು ರಾಜಾಪುರ ಮಠದಿಂದ ಬಿಜ್ಜಳ್ಳಿಮುಖಾಂತರ ಸಂಚಾರ ಮಾಡುವಾಗ ಅಜ್ಜ ಬಸವನಹಳ್ಳಿಗೆ ಆಗಮಿಸಿ ಇಲ್ಲಿಯೇಶಿವೈಕ್ಯರಾಗಿದ್ದು ನಂತರದಲ್ಲಿ ಇಲ್ಲಿಯೇ ಶ್ರೀ ಗದ್ದುಗೆ ಮಠವನ್ನು ಸ್ಥಾಪಿಸˉÁಗಿದೆ. ಶ್ರೀಮಠದಸ್ಥಾಪಿತ ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲವಾದರೂ ಸುಮಾರು 400 ವರ್ಷಗಳ ಇತಿಹಾಸಹೊಂದಿದೆ ಎಂದು ಹೇಳˉÁಗಿದೆ.ಹೀಗೆ ಸ್ಥಾಪಿತಗೊಂಡಿದ್ದ ಶ್ರೀಮಠವು ಭಕ್ತರ ಭಕ್ತಿ ಪೂರ್ವಕ ಸೇವೆಯಮುಖಾಂತರ ಮುನ್ನಡೆದಿದ್ದು ಕೆಲ ಕಾಲದ ನಂತರ ಅಸ್ತಿತ್ತ್ವ ಕಳೆದುಕೊಳ್ಳತೊಡಗಿತು.ಇಂತಹ ಸಮಯದಲ್ಲಿ ಊರಿನ ಭಕ್ತರು ಸಂತೆಕೋಡಿಯಲ್ಲಿದ್ದ ಶ್ರೀ ರಾಜಶೇಖರಸ್ವಾಮಿಗಳನ್ನು ಕರೆತಂದು ಮಠವನ್ನು ಅವರಿಗೆ ಒಪ್ಪಿಸಿದರು. ಶ್ರೀ ರಾಜಶೇಖರ ಸ್ವಾಮಿಗಳುಶ್ರೀಮಠದ ಪರಿಸರವನ್ನು ಸ್ವಚ್ಚಗೊಳಿಸಿಕೊಂಡು, ಒತ್ತುವರಿಯಾಗಿದ್ದ ಜಾಗವನ್ನುಸಂಪಾದಿಸಿಕೊಂಡು ಮುನ್ನಡೆದರು. ನಂತರ 1990ರಲ್ಲಿ ಶ್ರೀಮಠದ ಅಧಿಕಾರ ಸ್ವೀಕರಿಸಿಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದರು. 2001ರಲ್ಲಿ ಈಗಿನಶ್ರೀಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಿಕೊಂಡ ಶ್ರೀಗಳು 2002ರ ಮೇ 6ರಲ್ಲಿಲಿಂಗೈಕ್ಯರಾದರು.ಶ್ರೀಗಳು ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಶ್ರೀ ದೇಗುಲ ಮಠದಲ್ಲಿ ಪಡೆದು ನಂತರಶ್ರೀಕ್ಷೇತ್ರ ಮರಳೇಗವಿ ಮಠದ ಲಿಂಗ ಪೂಜ್ಯ ಚರಮೂರ್ತಿ ಕಾˉÁಗ್ನಿ ರುದ್ರಮುನಿಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಬೆಳೆದು ಬೃಹನ್ಮಠವಾದ ಬ್ಯಾಲಪಟ್ಟಿ ಮಠಕ್ಕೆಪಟ್ಟಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ನಂತರ 2001 ರಲ್ಲಿ ಶ್ರೀ ಮಠಕ್ಕೆ ಉತ್ತರಾಧಿಕಾರಿಯಾಗಿಬಂದ ಶ್ರೀ. ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದ ಸಂಪೂರ್ಣಜೀರ್ಣಾಭಿವೃದ್ದಿಯನ್ನು ಮಾಡಿದ್ದಾರೆ. ತದನಂತರ 2014ರ ಮೇ 5 ರಂದು ಶ್ರೀಮಠದಪಟ್ಟಾಧಿಕಾರವನ್ನು ಸ್ವೀಕರಿಸಿರುವ ಶ್ರೀಗಳು ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆಯೋಜನೆ ರೂಪಿಸಿಕೊಂಡು ಕಾರ್ಯತತ್ಪರರಾಗಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು
Date of Birth :
01-04-1981
Place :
ಬೇಲಪಟ್ಟಿ, ಡೆಂಕಣಿಕೋಟ ತಾ||
Pattadikara :
05-05-2014
Photo :
Programs
ಪ್ರತಿ ಹುಣ್ಣಿಮೆಗೆ ವಿಶೇಷ ಪೂಜೆ ವೈಶಾಖ ಮಾಸದಲ್ಲಿ ಲಿಂ|| ಷ.ಬ್ರ.ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ ಗೌರಿಹಬ್ಬದ ದಿನ ವಿಶೇಷ ಕಾರ್ಯಕ್ರಮ ಕಾರ್ತಿಕ ಮಾಸದಲ್ಲಿ ಕೊನೆ ಸೋಮವಾರ ದೀಪೋತ್ಸವ ಪಾಲ್ಗುಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ