ಮಂಡ್ಯ ಜಿˉÁ್ಲ ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ಅವ್ವೇರಹಳ್ಳಿಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಪಟ್ಟದ ಹೊಸಮಠವು ಶ್ರೀಮದ್ ರಂಭಾಪುರಿ ಪೀಠದಶಾಖಾಮಠವಾಗಿ ಶಿಷ್ಯವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಶ್ರೀಮಠದ ಸ್ಥಾಪನೆಯಬಗ್ಗೆ ನಿಖರವಾಗಿ ತಿಳಿದು ಬರುವುದಿಲ್ಲವಾದರೂ ಹಿಂದಿನ ಶ್ರೀಗಳನ್ನೇ ಕರ್ತೃಗುರುಗಳೆಂದುಹೆಸರಿಸˉÁಗುತ್ತಿದೆ.ಚಾಮರಾಜನಗರ ಜಿˉÉ್ಲಯ ನಾಗವಳ್ಳಿ ಗ್ರಾಮದಿಂದ ಸಂಚಾರ ಬಂದರೆಂದುಹೇಳˉÁಗುವ ಶ್ರೀ ಷ.ಬ್ರ. ಚನ್ನಂಜೇ ಮಹಾಸ್ವಾಮಿಗಳು ಅಲ್ಲಲ್ಲಿ ನೆˉÉನಿಂತುಅನುಷ್ಠಾನಗೊಳ್ಳುತ್ತಾ ಭಕ್ತರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸಿ ಕೊನೆಯಲ್ಲಿ ಅವ್ವೇರಹಳ್ಳಿಗ್ರಾಮಕ್ಕೆ ಆಗಮಿಸಿದ್ದಾರೆಂದು ಹೇಳˉÁಗುತ್ತದೆ. ಇಲ್ಲಿ ನೆˉÉನಿಂತ ಶ್ರೀಗಳು ಭಕ್ತರನ್ನುಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಶ್ರೀಮಠವನ್ನು ಸ್ಥಾಪಿಸಿ ಧಾರ್ಮಿಕಕಾರ್ಯಕ್ರಮಗಳನ್ನು ಮುನ್ನಡೆಸಿದರೆಂದು ತಿಳಿದುಬರುತ್ತದೆ. ಈ ರೀತಿಯಾಗಿ ಶ್ರೀಮಠವನ್ನುಸ್ಥಾಪಿಸಿ ಭಕ್ತರಿಗೆ ಸನ್ಮಾರ್ಗ ತೋರಿದ ಶ್ರೀಗಳು 1973ರ ಅಕ್ಟೋಬರ್ 21ರಲ್ಲಿಲಿಂಗೈಕ್ಯರಾಗಿದ್ದಾರೆ.ಶ್ರೀ ಚನ್ನಂಜೇ ಸ್ವಾಮಿಗಳ ಐಕ್ಯಾ ನಂತರ ಸುಮಾರು 40 ವರ್ಷಗಳ ಕಾಲ ಖಾಲಿಉಳಿದ ಶ್ರೀಮಠಕ್ಕೆ ಊರಿನ ಭಕ್ತರು ಸಿದ್ದಗಂಗಾ ಶ್ರೀಗಳ ಮಾರ್ಗದರ್ಶನದಲ್ಲಿ ಕ್ಷೇತ್ರದಶಾಸಕರಾದ ಸಿ.ಎಸ್. ಪುಟ್ಟರಾಜುರವರ ಮುಂದಾಳತ್ವದಲ್ಲಿ ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳನ್ನು ಅಧಿಕಾರಕ್ಕೆ ತಂದಿದ್ದಾರೆ. 2012ರ ಅಕ್ಟೋಬರ್30ರಲ್ಲಿ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದ ಶ್ರೀಗಳು ಅಂದಿನಿಂದ ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸುವತ್ತ ಚಿತ್ತಹರಿಸಿದ್ದಾರೆ.ಶ್ರೀ ಮಠದಲ್ಲಿ ಶ್ರೀ ಮಹಾದೇಶ್ವರರ ಗದ್ದುಗೆ ಹಾಗೂ ಹಿಂದಿನ ಶ್ರೀಗಳಾದ ಶ್ರೀಚನ್ನಂಜೇ ಸ್ವಾಮಿಗಳ ಗದ್ದುಗೆಗಳಿದ್ದು ನಿತ್ಯ ಪೂಜೆಗೆ ಒಳಪಟ್ಟಿವೆ. ಪ್ರತಿ ವರ್ಷ ಆಶ್ವೀಜಮಾಸದಲ್ಲಿ ಹಿಂದಿನ ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ ನಡೆಸˉÁಗುತ್ತಿದೆ ಹಾಗೂಶ್ರೀಮಠದ ಆವರಣದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನವಿದ್ದು ಪ್ರತಿ ವರ್ಷ ಬಸವ ಜಯಂತಿಆಚರಣೆ ನಡೆಯುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಗಳು
Date of Birth :
15-11-1987
Place :
ಮಾರಸಿಂಗನಹಳ್ಳಿ, ಶ್ರೀರಂಗಪಟ್ಟಣ ತಾ||
Pattadikara :
30-11-2012
Photo :
Programs
ಆಶ್ವೀಜ ಮಾಸದಲ್ಲಿ ಲಿಂ. ಶ್ರೀ ಷ.ಬ್ರ. ಚನ್ನಂಜೇ ಸ್ವಾಮಿಗಳ ಪುಣ್ಯಾರಾಧನೆ
ಕಾರ್ತೀಕ ಮಾಸದಲ್ಲಿ ಕಾರ್ತೀಕೋತ್ಸವ ಶಿವರಾತ್ರಿ ಹಾಗೂ ಧನುರ್ಮಾಸಗಳಲ್ಲಿ ವಿಶೇಷ ಪೂಜೆ
ಬಸವ ಜಯಂತಿ ಕಾರ್ಯಕ್ರಮ 5 ವರ್ಷಕ್ಕೆ ಒಮ್ಮೆ ಶ್ರೀ ಬಸವೇಶ್ವರ ಅಗ್ನಿಕೊಂಡೋತ್ಸವ
Photos
Full Address Kannada
ಶ್ರೀ ಪಟ್ಟದ ಹೊಸಮಠ ಅವ್ವೇರಹಳ್ಳಿ,
ಎಲಿಯಾರು ಪೋ - 571 405 ದುದ್ದ ಹೋಬಳಿ,
ಮಂಡ್ಯ ತಾ|| & ಜಿಲ್ಲೆ