Shrishail Panditaradhya Matha

Shrishail Panditaradhya Matha Claimed

ಶ್ರೀಶೈಲ ಪಂಡಿತಾರಾಧ್ಯ ಮಠ

Average Reviews

Description

ಶ್ರೀಶೈಲ ಪಂಡಿತಾರಾಧ್ಯ ಮಠ

ಕರ್ತೃ – ಶ್ರೀಶೈಲ ಜಗದ್ಗುರು ಉಮಾಪತಿ ಪಂಡಿತಾರಾಧ್ಯ ಮಹಾಸ್ವಾಮಿಗಳು

ರಾಯಚೂರು ಜಿˉÉ್ಲ ಸಿಂಧನೂರು ತಾಲ್ಲೂಕಿನ ಗುಂಡ ಗ್ರಾಮವು ತಾಲ್ಲೂಕುಕೇಂದ್ರದಿಂದ 42 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದ ಹಳ್ಳದ ದಡದಲ್ಲಿಇತ್ತೀಚೆಗೆ ಸ್ಥಾಪಿತಗೊಂಡಿರುವ ಶ್ರೀಶೈಲ ಪಂಡಿತಾರಾಧ್ಯ ಮಠವು ಅಸ್ತಿತ್ವದಲ್ಲಿದ್ದು ಶ್ರೀಶೈಲಪೀಠದ ಶಾಖಾಮಠವಾಗಿ ಪ್ರಚಲಿತಕ್ಕೆ ಬಂದಿದೆ.ಸುಮಾರು 2002ರಲ್ಲಿ ಸ್ಥಾಪಿತಗೊಂಡಿರುವ ಶ್ರೀಮಠದ ಸಂಸ್ಥಾಪಕರು ಶ್ರೀಶೈಲಪೀಠದ ಹಿಂದಿನ ಜಗದ್ಗುರುಗಳಾದ ಶ್ರೀ ಉಮಾಪತಿ ಪಂಡಿತಾರಾಧ್ಯ ಮಹಾಸ್ವಾಮಿಗಳು.ಶ್ರೀಗಳ ಭಕ್ತರು ನಾಡಿನಾದ್ಯಂತ ಪಸರಿಸಿದ್ದು ಇಂತಹ ಭಕ್ತರ ಒತ್ತಾಸೆಯಂತೆ, ಗುಂಡ ಗ್ರಾಮದಜನರು ದಾನ ನೀಡಿದ್ದ 12 ಎಕರೆ ಭೂಮಿಯಲ್ಲಿ ಶ್ರೀಮಠವು ಸ್ಥಾಪನೆಗೊಂಡಿದೆ. ಶ್ರೀಉಮಾಪತಿ ಪಂಡಿತಾರಾಧ್ಯ ಸ್ವಾಮಿಗಳು ಈಗಿನ ಶ್ರೀಗಳನ್ನು ನೇಮಕಗೊಳಿಸಿದ್ದಾರೆ.ಈಗಿನ ಶ್ರೀಗಳಾದ ಪರಮಪೂಜ್ಯ ಶ್ರೀ ರಾಚೋಟೇಶ್ವರ ಸ್ವಾಮಿಗಳು ಶ್ರೀಮಠವುಸ್ಥಾಪಿತಗೊಂಡಂದಿನಿಂದಲೂ ಶ್ರೀಶೈಲ ಗುರುಗಳ ಆಶಯದಂತೆ ಶ್ರೀಮಠದ ಅಧಿಕಾರವಹಿಸಿಕೊಂಡು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಶ್ರೀಗಳು ಶ್ರೀಮಠದಜಮೀನನ್ನು ಅಭಿವೃದ್ಧಿಗೊಳಿಸಿದ್ದು ಶ್ರೀಮಠದ ಕಟ್ಟಡವನ್ನು ವಿಸ್ತಾರಗೊಳಿಸಿದ್ದಾರೆ.ಶ್ರೀಗಳು ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗೆ ವಿಶೇಷಪೂಜೆ, ಮಾಘ-ಪಾಲ್ಗುಣ ಮಾಸದಲ್ಲಿ ಶ್ರೀ ಹೇಮರೆಡ್ಡಿ ಮಲ್ಲಮ್ಮನ ಪುರಾಣವನ್ನುಆಯೋಜಿಸˉÁಗುತ್ತದೆ. ಹಾಗೂ ಶ್ರಾವಣ ಮಾಸದ ಚೌತಿ ದಿವಸ ಕುಂಭ-ಕಳಸದಮೆರವಣಿಗೆ ನಡೆಯುತ್ತಿದ್ದು ಅಪಾರ ಸಂಖ್ಯೆಯ ಭಕ್ತರು ಪಾˉÉ್ಗೂಂಡು ಗುರುಗಳಆಶೀರ್ವಾದ ಪಡೆಯುತ್ತಾರೆ.

Swamiji

Swamiji Name :
ಪೂಜ್ಯ ಶ್ರೀ ರಾಚೋಟೇಶ್ವರ ಸ್ವಾಮಿಗಳು
Date of Birth :
5-4-1948
Place :
ಕೋಟ್ಯಾಳ, ವಿಜಯಪುರ ತಾ||
Photo :

Programs

¥ತಿÀ್ರ ಅಮವಾಸ್ಯೆಗೆ ವಿಶೇಷ ಪೂಜೆ. ಮಾಘ, ಪಾಲ್ಗುಣ ಮಾಸದಲ್ಲಿ ಶ್ರೀ ಹೇಮರೆಡ್ಡಿ ಮಲ್ಲಮ್ಮನ ಪುರಾಣ ಪ್ರವಚನ. ಶ್ರಾವಣ ಮಾಸದಲ್ಲಿ ಚೌತಿ ದಿವಸ ಬೃಹತ್ ಕುಂಭ ಕಳಸದ ಮೆರವಣಿಗೆ.

Photos

Full Address Kannada

ಶ್ರೀಶೈಲ ಪಂಡಿತಾರಾಧ್ಯ ಮಠ ಗುಂಡ - 584 132 ಸಿಂಧನೂರು ತಾ||, ರಾಯಚೂರು ಜಿ||

Map

Near by Places

ಕಲಮಂಗಿ ಕ್ರಾಸ್ - 13 ಕಿ.ಮೀ. ಸಿಂಧನೂರು - 42 ಕಿ.ಮೀ. ಕುಷ್ಠಗಿ - 30 ಕಿ.ಮೀ.

Statistic

260 Views
0 Rating
0 Favorite
0 Share
error: Content is protected !!