ವಾಟಾಳು ಗ್ರಾಮದಲ್ಲಿ ಅಸ್ತಿತ್ವದಲ್ಲಿರುವ ಶ್ರೀ ಸೂರ್ಯ ಸಿಂಹಾಸನ ಸಂಸ್ಥಾನಮಠವು ಅತಿ ಪುರಾತನ ಕಾಲದ್ದಾಗಿದ್ದು ಸುಮಾರು 10-11ನೇ ಶತಮಾನದಲ್ಲಿಸ್ಥಾಪಿತಗೊಂಡಿರಬಹುದೆಂದು ಹೇಳˉÁಗಿದೆ. ಶ್ರೀ ಶ್ರೀಶೈಲ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿರುವ ಶ್ರೀ ಮಠದ ಕರ್ತೃಗುರುಗಳೆಂದು ಪೂಜ್ಯಶ್ರೀ ಬಸವಲಿಂಗ ಯತಿಗಳನ್ನು ಗುರುತಿಸˉÁಗಿದೆ.ಕರ್ತೃಗುರುಗಳು ಮಹಾನ್ ದೈವನಿಷ್ಠರಾಗಿದ್ದು ಇವರು ಸಾಕಿದ್ದ ಬಸವ ಹಾಗೂಇವರ ನಡುವಿನ ಬಾಂದವ್ಯವನ್ನು ತಿಳಿಸುವ ಒಂದು ಜನಪದ ಕಥೆ ಈ ಭಾಗದಲ್ಲಿಪ್ರಚಲಿತದಲ್ಲಿದೆ. ಕರ್ತೃಗಳ ನಂತರದಲ್ಲಿ ಬಂದಿರುವ ಗುರುಗಳ ಬಗ್ಗೆ ಸ್ಪಷ್ಟತೆಯಿಲ್ಲ. ಈಗಿನಶ್ರೀಗಳ ಪ್ರಕಾರ ಇಲ್ಲಿಯವರೆಗೂ 25 ಜನ ಶ್ರೀಗಳು ಶ್ರೀಮಠದ ಪಟ್ಟಕ್ಕೆ ಬಂದಿದ್ದು ಈಗಿನವರು26ನೇಯವರು ಎಂದು ಹೇಳಬಹುದು. ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಪಟ್ಟದ ಬಸವಲಿಂಗಶಿವಾಚಾರ್ಯ ಮಹಾಸ್ವಾಮಿಗಳು ಮಹಾನ್ ದಾಸೋಹ ಮೂರ್ತಿಗಳಾಗಿದ್ದು ಈಕಾರಣದಿಂದಾಗಿ ಅವರಿಗೆ “ಶ್ರೀ ಅನ್ನದಾನಿ ಮಹಾಪ್ರಭು”ಗಳೆಂದು ಕರೆಯುತ್ತಿದ್ದರು. ಶ್ರೀಗಳಕಾಲದಲ್ಲಿ ಪ್ರತಿನಿತ್ಯ ದಾಸೋಹವು ನಿರಂತರವಾಗಿ ನಡೆಯುತ್ತಿತ್ತೆಂದು ಹೇಳˉÁಗುತ್ತಿದೆ. ಶ್ರೀಷ.ಬ್ರ. ಪಟ್ಟದ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು 1972ರ ಮೇ 13ರಂದುಲಿಂಗೈಕ್ಯರಾದರು.ಪ್ರಸ್ತುತ 1972ರ ಮೇ 24ರಂದು ಶ್ರೀ ಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿಶ್ರೀಮಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬರುತ್ತಿರುವ ಶ್ರೀ ಷ.ಬ್ರ. ಸಿದ್ದಲಿಂಗಶಿವಾಚಾರ್ಯ ಮಹಾಸ್ವಾಮಿಗಳು ಅಧಿಕಾರದಲ್ಲಿದ್ದು, ಅಪಾರ ಸಂಖ್ಯೆಯ ಭಕ್ತ ಬಳಗವನ್ನುಸಂಪಾದಿಸಿಕೊಂಡಿದ್ದಾರೆ. ಶ್ರೀಗಳು ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಗಮನ ನೀಡದೇಜೊತೆಯಲ್ಲಿ ಸಾಹಿತ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡುಬರುತ್ತಿದ್ದಾರೆ. ಪ್ರತಿ ವರ್ಷ ಕರ್ತೃಗುರುಗಳ ಹಾಗೂ ಇತರ ಗುರುಗಳ ಆರಾಧನಾಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಾಡಿನ ಹೆಸರಾಂತ ವಿದ್ವಾಂಸರು, ಮಠಾಧೀಶರನ್ನುಕರೆಸಿ ವಿವಿಧ ಕ್ಷೇತ್ರಗಳಲ್ಲಿ ದುಡಿದ ಸಾಧಕ, ಗಣ್ಯರಿಗೆ ಸನ್ಮಾನಿಸುತ್ತಾ ಬಂದಿದ್ದಾರೆ ಹಾಗೂಶ್ರೀಮಠದ ಸರ್ವಾಂಗೀಣ ಅಭಿವೃದಿ್ಧಯೋಜನೆ ರೂಪಿಸಿಕೊಂಡುಕಾರ್ಯಪ್ರವೃತ್ತರಾಗಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1950
Place :
ವಾಟಾಳು, ಟಿ.ನರಸೀಪುರ ತಾ||
Pattadikara :
24-05-1972
Photo :
Programs
ಪ್ರತಿ ಅಮವಾಸೆಗೆ ವಿಶೇಷ ಪೂಜೆ
ಶಿವರಾತ್ರಿಗೆ ವಿಶೇಷ ಪೂಜೆ ಯುಗಾದಿಗೆ "ಹೊನ್ನಿನ ಏರು ಹುಂಡಿ" ಕಾರ್ಯಕ್ರಮ
ಶಾª್ರÀಣ ಮಾಸದಲ್ಲಿ ನಿತ್ಯ ಪುರಾಣ ಪ್ರವಚನ ಕಾರ್ಯಕ್ರಮ
Photos
Full Address Kannada
ಶ್ರೀ ಸೂರ್ಯಸಿಂಹಾಸನ ಸಂಸ್ಥಾನ ಮಠ
ವಾಟಾಳು - 571 124
ಟಿ. ನರಸೀಪುರ ತಾ|| ಮೈಸೂರು ಜಿಲ್ಲೆ