ಮೈಸೂರು ಜಿˉÉ್ಲ ಟಿ. ನರಸೀಪುರ ತಾಲ್ಲೂಕು ಕೇಂದ್ರದಿಂದ 25 ಕಿ.ಮೀ.ದೂರದಲ್ಲಿರುವ ಪರಿಣಾಮಿಪುರ ಗ್ರಾಮದಿಂದ 1 ಕಿ.ಮೀ. ಅಂತರದಲ್ಲಿ ಅಸ್ತಿತ್ವದಲ್ಲಿರುವ ಶ್ರೀಬಿದರೆ ಚೌಕಿಮಠವು ಯಡೆಯೂರು ಸಿದ್ಧಲಿಂಗೇಶ ್ವರರ ಕಾಲ ಘಟ್ಟದಲ್ಲಿಸ್ಥಾಪಿತಗೊಂಡಿತೆಂದು ಹೇಳˉÁಗಿದ್ದು, ಶ್ರೀಮಠದ ಕರ್ತೃಗುರುಗಳೆಂದು ಶ್ರೀ ಮ.ನಿ.ಪ್ರ. ವಿರಕ್ತಒಡೆಯರು ಇವರನ್ನು ಗುರುತಿಸˉÁಗಿದೆ.ಶ್ರೀ ಸಿದ್ದಲಿಂಗೇಶ್ವರರು ತಮ್ಮ ಏಳುನೂರೊಂದು ವಿರಕ್ತರ ಜೊತೆ ˉÉೂೀಕಸಂಚಾರಮಾಡುತ್ತಾ ಪರಿಣಾಮಿಪುರಕೆ ್ಕ ಬಂದು ಈ ಪ್ರಶಾಂತ ವಾತಾವರಣದಲ್ಲಿಅನುಷ್ಠಾನಗೊಂಡಿದ್ದರು. ಭಕ್ತರ ಆಶಯಕ್ಕೆ ಸ್ಪಂದಿಸಿದ ಶ್ರೀಗಳು ತಾವು ನೆˉÉನಿಂತ ಸ್ಥಳದಲ್ಲಿಶ್ರೀ ಬಿದರೆ ಚೌಕಿ ಮಠವನ್ನು ಸ್ಥಾಪಿಸಿ ಶ್ರೀ ವಿರಕ್ತ ಒಡೆಯರನ್ನು ಇಲ್ಲಿಗೆ ನೇಮಿಸಿ,ಧರ್ಮಪ್ರಚಾರವನ್ನು ಕೈಗೊಳ್ಳಲು ವ್ಯವಸ್ಥೆಮಾಡಿದರೆಂದು ಹೇಳˉÁಗುತ್ತದೆ.ಕರ್ತೃಗುರುಗಳ ನಂತರ ಸುಮಾರು 9 ಜನ ಶ್ರೀಗಳು ಅಧಿಕಾರ ನಡೆಸಿದ್ದು ಎˉÁ್ಲಶ್ರೀಗಳು ಧಾರ್ಮಿಕ ಕಾರ್ಯಗಳ ಜತೆಗೆ ಸಾಮಜಿಕ ಅಭಿವೃದ್ಧಿಯ ಕಡೆಗೆ ಹೆಚ್ಚು ಒತ್ತು ಕೊಟ್ಟುಶ್ರಮಿಸಿದ್ದಾರೆ. ಶ್ರೀಮಠದ ಮೂರನೇ ಗುರುಗಳಾದ ಶ್ರೀ ಮ.ನಿ.ಪ್ರ. ಗೊಗ್ಗಪ್ಪಮಹಾಸ್ವಾಮಿಗಳು ಸಂಚಾರಕ್ಕೆ ಹೋದ ಸಂದರ್ಭದಲ್ಲಿ ಸಿದ್ದಗಂಗೆಯಲ್ಲಿ ಲಿಂಗೈಕ್ಯರಾಗಿದ್ದುಅವರ ಗದ್ದುಗೆಯನ್ನು ಅಲ್ಲಿಯೇ ನಿರ್ಮಿಸˉÁಗಿದೆ. ಶ್ರೀಮಠದ ಒಳಭಾಗದಲ್ಲಿ ಕರ್ತೃಗುರುಗಳಾದ ಶ್ರೀ ಮ.ನಿ.ಪ್ರ. ವಿರಕ್ತ ಒಡೆಯರ್ರವರ ಗದ್ದುಗೆ ನಿರ್ಮಾಣಗೊಂಡಿದ್ದುಶ್ರೀಮಠದಲ್ಲಿ ಒಟ್ಟು ಏಳು ಗದ್ದುಗೆಗಳನ್ನು ಕಾಣಬಹುದು.ತಮ್ಮ 8ನೇ ವಯಸ್ಸಿನಲ್ಲಿಯೇ ಶ್ರೀಮಠದ ಪಟ್ಟಾಧಿಕಾರ ಸ್ವೀಕರಿಸಿದ ಪ್ರಸ್ತುತಶ್ರೀಗಳಾದ ಶ್ರೀ.ಮ.ನಿ.ಪ್ರ ಗುರುಸಿದ್ದ ಸ್ವಾಮಿಗಳು ಶ್ರೀಮಠವನ್ನು ಸರ್ವಾಂಗೀಣವಾಗಿಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇವರು ಮಠದ ಅಧಿಕಾರ ಸ್ವೀಕರಿಸಿದಾಗ ಮಠದಆಸ್ತಿ ಅನ್ಯರ ಪಾˉÁಗಿತ್ತು. ಕೆಲವು ವಿವಾದದಿಂದ ಸರ್ಕಾರ ಈ ಆಸ್ತಿಯನ್ನು ತನ್ನ ಸ್ವಾಧೀನಕ್ಕೆತೆಗೆದುಕೊಂಡಿತ್ತು. ಗುರುಗಳು ನ್ಯಾಯಾಲಯದಲ್ಲಿ ಹೋರಾಡಿ ಮಠದ ಆಸ್ತಿಯನ್ನು ಮಠಕ್ಕೆಪುನಃ ಸಂಪಾದಿಸಿಕೊಂಡು ಪಾಳುಬಿದ್ದಿದ್ದ ಜಮೀನನ್ನು ತಮ್ಮ ಪರಿಶ್ರಮದಿಂದಅಭಿವೃದ್ಧಿಪಡಿಸಿದ್ದು ಭಕ್ತರನ್ನು ತಮ್ಮ ಜೊತೆಯಲ್ಲಿ ಕೊಂಡೊಯ್ಯುತ್ತಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರುಸಿದ್ದ ಸ್ವಾಮಿಗಳು
Date of Birth :
1922
Place :
ಪರಿಣಾಮಿಪುರ, ಟಿ.ನರಸೀಪುರ ತಾ||
Pattadikara :
1930
Photo :
Programs
ಬಸವ ಜಯಂತಿ ಆಚರಣೆ
ಶ್ರಾವಣ ಮಾಸದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು
ಕಾರ್ತಿಕ ಮಾಸದಲ್ಲಿ ವಿಶೇಷ ಧಾರ್ಮಿಕ ಆಚರಣೆಗಳು
Photos
Full Address Kannada
ಶ್ರೀ ಬಿದರೆ ಚೌಕಿಮಠ
ಪರಿಣಾಮಿಪುರ, ಕಾವೇರಿಪುರ(ಪೋ) - 571 122
ಟಿ. ನರಸೀಪುರ ತಾ||, ಮೈಸೂರು ಜಿಲ್ಲೆ