ಮೈಸೂರು ನಗರದ ನಂಜನಗೂಡು ರಸ್ತೆಯ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿಈಗ್ಗೆ ಸುಮಾರು 2 ಶತಮಾನಗಳ ಹಿಂದೆ ಪೂಜ್ಯ ಶ್ರೀ ಮ.ನಿ.ಪ್ರ. ಮಹಾಲಿಂಗಮಹಾಸ್ವಾಮಿಗಳಿಂದ ಸ್ಥಾಪಿತಗೊಂಡ ಶ್ರೀ ಅರಮನೆ ಪಂಚಗವಿ ಮಠವು ಪೂರ್ಣವಾಗಿರಾಜಾಶ್ರಯದಲ್ಲಿಯೇ ಬೆಳೆದು ತನ್ನ ಧಾರ್ಮಿಕ ಚಟುವಟಿಕೆಗಳ ಮೂಲಕ ಅಪಾರ ಭಕ್ತಬಳಗವನ್ನು ಹೊಂದಿದೆ. ಕರ್ತೃ ಗುರುಗಳು ಉತ್ತರದ ಕಡೆಯಿಂದ ಸಂಚಾರ ಬಂದುಶ್ರೀಮಠವನ್ನು ಸ್ಥಾಪಿಸಿದರೆಂದು ತಿಳಿದು ಬರುತ್ತದೆ.ಕರ್ತೃ ಗುರುಗಳ ನಂತರದ ಶ್ರೀ ಮ.ನಿ.ಪ್ರ. ಶಿವಬಸವ ಸ್ವಾಮಿಗಳುತಪೋನಿಷ್ಠರಾಗಿದ್ದು ತಮ್ಮ ಆಚರಣೆಗಳ ಮೂಲಕ ಪ್ರಸಿದ್ದಿಗೊಂಡಿದ್ದರು. ಶ್ರೀಗಳ ಕಾಲದಲ್ಲಿಮೈಸೂರಿನ ಅರಸರಾಗಿದ್ದ ಶ್ರೀ ಕೃಷ್ಣರಾಜ ಒಡೆಯರ್ರವರು ಶಾಲಿವಾಹನ ಶಕ 1768ರಲ್ಲಿಶ್ರೀಮಠವನ್ನು ಕಟ್ಟಿಸಿ ಶ್ರೀ ಶಿವಬಸವ ಸ್ವಾಮಿಗಳ ಸನ್ನಿದಿಗೆ ಅರ್ಪಿಸಿದ್ದಾರೆ. ಈ ಕುರಿತಂತೆಶ್ರೀಮಠದಲ್ಲಿ ಶಾಸನವನ್ನು ಕಾಣಬಹುದಾಗಿದೆ. ಇವರ ನಂತರ ಅನೇಕ ಶ್ರೀಗಳುಶ್ರೀಮಠವನ್ನು ಮುನ್ನಡೆಸಿದ್ದು 7ನೇ ಶ್ರೀಗಳಾದ ಶ್ರೀ ಮ.ನಿ.ಪ್ರ. ಗೌರೀಶಂಕರಮಹಾಸ್ವಾಮಿಗಳ ಕಾಲದಲ್ಲಿ ಶ್ರೀಮಠವು ಹೆಚ್ಚು ಪ್ರಬುದ್ದಮಾನಕ್ಕೆ ಬಂದಿದೆ. ಶ್ರೀಗಳುಕಾಶಿಯಲ್ಲಿ ಸಂಸ್ಕøತ ಪಾಂಡಿತ್ಯವನ್ನು ಪಡೆದು ಅಲ್ಲಿಯೇ ಸಂಸ್ಕøತ ಪಂಡಿತರಾಗಿಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.ಶ್ರೀ ಗೌರಿಶಂಕರ ಸ್ವಾಮಿಗಳು ಮೈಸೂರಿಗೆ ಬಂದು ಶ್ರೀ ಅರಮನೆ ಪಂಚಗವಿಮಠದ ಆಡಳಿತ ವಹಿಸಿಕೊಂಡು ಅಭಿವೃದ್ದಿಪಡಿಸಿದರು. ಶ್ರೀಗಳು ಮೈಸೂರಿನಲ್ಲಿದ್ದ ಕೆಲವೇಸಂಸ್ಕøತ ಪಂಡಿತರಲ್ಲಿ ಒಬ್ಬರಾಗಿದ್ದು ಅನೇಕ ಗುರುಗಳನ್ನು ತಮ್ಮ ಪಾಂಡಿತ್ಯದ ವಲಯದಲ್ಲಿಪರಿಪಕ್ವಗೊಳಿಸಿದ್ದರು. ಅವರಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರಮಹಾಸ್ವಾಮಿಗಳು ಹಾಗೂ ಸಿರಿಗೆರೆಯ ಬೃಹನ್ಮಠದ ಲಿಂಗೈಕ್ಯ ಶ್ರೀ ಶಿವಕುಮಾರಮಹಾಸ್ವಾಮಿಗಳು ಇದ್ದಾರೆ.1995ರ ಜನವರಿ 10ರಂದು ಶ್ರೀಮಠದ ಅಧಿಕಾರ ವಹಿಸಿಕೊಂಡ ಪ್ರಸ್ತುತಶ್ರೀಗಳಾದ ಶ್ರೀ ಮ.ನಿ.ಪ್ರ. ಗುರು ಬಸವಲಿಂಗ ಸ್ವಾಮಿಗಳು ಮೈಸೂರು ವಿಶ್ವವಿದ್ಯಾನಿಲಯದಸ್ನಾತಕ ಪದವೀದರರು. ಶ್ರೀಗಳು ಶ್ರೀಮಠದ ಅಧಿಕಾರ ವಹಿಸಿಕೊಂಡ ನಂತರ ಮಠದಚಿತ್ರಣವನ್ನೇ ಬದˉÁಯಿಸಿದ್ದಾರೆ. ಶ್ರೀಮಠದ ಸರ್ವಾಂಗೀಣ ಅಭಿವೃದ್ದಿಗೆ ಯೋಜನೆರೂಪಿಸಿಕೊಂಡು ಕಾರ್ಯಪ್ರವೃತ ್ತರಾಗಿರುವ ಶ್ರೀಗಳು ಶೈಕ ್ಷಣಿಕವಾಗಿಯೂಸಾಹಿತ್ಯಿಕವಾಗಿಯೂ ಶ್ರೀಮಠವನ್ನು ಚಟುವಟಿಕೆಯ ಕೇಂದ್ರವನ್ನಾಗಿಸಿದ್ದಾರೆ.
Swamiji
Swamiji Name :
ಶ್ರೀ ಮ.ನಿ.ಪ್ರ. ಗುರು ಬಸವಲಿಂಗ ಸ್ವಾಮಿಗಳು
Date of Birth :
23-07-1984
Pattadikara :
10-01-1995
Photo :
Programs
ಪ್ರತಿ ಅಮವಾಸೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ
ಶಾª್ರÀಣ ಮಾಸದಲ್ಲಿ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ
ಬಸವ ಜಯಂತಿ ಆಚರಣೆ ಡಿಸೆಂಬರ್ನಲ್ಲಿ ಶರಣ ಸಂದೇಶ ಕಾರ್ಯಕ್ರಮ
ಕಾರ್ತಿಕದಲ್ಲಿ ಕಾರ್ತಿಕೋತ್ಸವ
Institutions
ಕಿರಿಯ / ಹಿರಿಯ ಪ್ರಾಥಮಿಕ ಪೌq್ರsÀಶಾˉÉ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಅರಮನೆ ಪಂಚಗವಿ ಮಠ
ಶ್ರೀ ಚಾಮುಂಡಿಬೆಟ್ಟದ ತಪ್ಪಲು,
ನಂಜನಗೂಡು ರಸ್ತೆ ಮೈಸೂರು-570 004