Shree Guru Gangadhareshwara Samsthana Hirematha, ShiraShyada

Shree Guru Gangadhareshwara Samsthana Hirematha, ShiraShyada Claimed

ಶ್ರೀ ಗುರು ಗಂಗಾಧರೇಶ್ವರ ಸಂಸ್ಥಾನ ಹಿರೇಮಠ, ಶಿರಶ್ಯಾಡ

Average Reviews

Description

ಶ್ರೀ ಗುರು ಗಂಗಾಧರೇಶ್ವರ ಸಂಸ್ಥಾನ ಹಿರೇಮಠ, ಶಿರಶ್ಯಾಡ

ಕರ್ತೃ – ಶ್ರೀ ಷ.ಬ್ರ. ಗಂಗಾಧರ ಶಿವಾಚಾರ್ಯ ಸ್ವಾಮಿಗಳು

ಇಂಡಿ ತಾಲ್ಲೂಕಿನ ಶಿರಶ್ಯಾಡ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಷ.ಬ್ರ. ಗಂಗಾಧರಶಿವಾಚಾರ್ಯ ಸ್ವಾಮಿಗಳಿಂದ ಪುರಾತನ ಕಾಲದಲ್ಲಿ ಸ್ಥಾಪಿತಗೊಂಡಿರುವ ಶ್ರೀ ಗುರುಗಂಗಾಧರೇಶ್ವರ ಸಂಸ್ಥಾನ ಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ. ಕರ್ತೃಗುರುಗಳಾದ ಶ್ರೀ ಷ.ಬ್ರ. ಗಂಗಾಧರಶಿವಾಚಾರ್ಯರು ತಪೋನಿಷ್ಠರೂ, ವಾಕ್ಸಿದ್ಧಿ ಪುರುಷರೂ ಆಗಿದ್ದು ಭಕ್ತರನ್ನು ತಮ್ಮಉಪದೇಶಾಮೃತಗಳಿಂದ ಸನ್ಮಾರ್ಗದತ್ತ ಕೊಂಡೊಯ್ದಿದ್ದಾರೆ ಹಾಗೂ ತಮ್ಮ ಕರ್ತೃತ್ವಶಕ್ತಿಯಿಂದ ಮಠವನ್ನು ಜಾಗೃತ ಸ್ಥಳವಾಗಿ ಪರಿವರ್ತಿಸಿ ಜೀವಂತ ಸಮಾಧಿಯಾಗಿದ್ದಾರೆ.ಕರ್ತೃಗುರುಗಳ ನಂತರ ಶ್ರೀ ಷ.ಬ್ರ. ಕಾಶಿಪತಿ ಶಿವಾಚಾರ್ಯ ಸ್ವಾಮಿಗಳುಪಟ್ಟಾಧಿಕಾರ ಸ್ವೀಕರಿಸಿದ್ದು ತದನಂತರ ಶ್ರೀ ಷ.ಬ್ರ. ಸೋಮಯ್ಯ ಶಿವಾಚಾರ್ಯ ಸ್ವಾಮಿಗಳುಪಟ್ಟಕ್ಕೆ ಬಂದಿದ್ದಾರೆ. ಶ್ರೀಗಳು ತಮ್ಮ ಧಾರ್ಮಿಕ ಆಚರಣೆಗಳಿಂದ ಭಕ್ತರನ್ನು ಸಂಪಾದಿಸಿವೀರಶೈವ ಧರ್ಮಾಚರಣೆಗಳ ಮಹತ್ವವನ್ನು ವಿವರಿಸಿ ಅವರಿಗೆ ಸಂಸ್ಕಾರ ನೀಡುತ್ತಿದ್ದರು.ಇವರ ನಂತರ ಅಧಿಕಾರ ವಹಿಸಿಕೊಂಡ ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ.ಮುರುಘೇಂದ್ರ ಶಿವಾಚಾರ್ಯ ಸ್ವಾಮಿಗಳು 1948ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನುವಹಿಸಿಕೊಂಡು ಅಭಿವೃದ್ಧಿಗೊಳಿಸಿದ್ದಾರೆ. ಶ್ರೀಗಳು ಪವಾಡ ಪುರುಷರೆಂದು ಹೆಸರಾಗಿದ್ದುತಮ್ಮ ಪವಾಡಗಳ ಮೂಲಕ ಭಕ್ತರನ್ನುದ್ದರಿಸಿದ್ದಾರೆ ಎಂದು ಭಕ್ತರು ಹೇಳುತ್ತಾರೆ. ಶ್ರೀಗಳು1981ರಲ್ಲಿ ಲಿಂಗೈಕ್ಯರಾಗಿದ್ದು ತದನಂತರ ಶ್ರೀ ಮುರುಘೇಂದ್ರ ದೇವರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ.ಅಭಿನವ ಮುರುಘೇಂದ್ರ ಶಿವಾಚಾರ್ಯ ಸ್ವಾಮಿಗಳು2014ರ ಫೆಬ್ರವರಿ 9 ರಲ್ಲಿ ಶ್ರೀಮಠದ ಪಟ್ಟಾಧಿಕಾರ ವಹಿಸಿಕೊಂಡು ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿದ್ದಾರೆ. ಶ್ರೀಗಳು ಕ್ರಿಯಾಶೀಲರಾಗಿದ್ದು ಭಕ್ತರ ಸಹಕಾರದೊಂದಿಗೆಶ್ರೀಮಠವನ್ನು ಅಭಿವೃದ್ಧಿ ಪಡಿಸುವತ್ತ ಗಮನಹರಿಸಿದ್ದಾರೆ. ಶ್ರೀ ಮಠದಲ್ಲಿ ಛಟ್ಟಿ ಅಮವಾಸ್ಯೆಗೆಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ ಮಹೋತ್ಸವ ನಡೆಯುತ್ತಿದ್ದು ಆ ಸಮಯದಲ್ಲಿಯೇಶ್ರೀಮಠದ ಜಾತ್ರೆಯು ಸಹ ನಡೆಯುತ್ತದೆ.

Swamiji

Swamiji Name :
ಶ್ರೀ ಷ.ಬ್ರ. ಅಭಿನವ ಮುರುಘೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
18-3-1987
Place :
ಶಿರಶ್ಯಾಡ, ಇಂಡಿ ತಾ||
Pattadikara :
9-2-2014
Photo :

Programs

ಶ್ರೀಗಳ ಹುಟ್ಟುಹಬ್ಬದ ಪ್ರಯುಕ್ತ ಸಾಮೂಹಿಕ ವಿವಾಹಗಳು, ಜನಜಾಗೃತಿ ಕಾರ್ಯಕ್ರಮಗಳು.
ಛಟ್ಟಿ ಅಮವಾಸ್ಯೆ ಆದ 5ನೇ ದಿನಕ್ಕೆ ಲಿಂ. ಶ್ರೀ ಷ.ಬ್ರ. ಮುರುಗೇಂದ್ರ ಶಿವಾಚಾರ್ಯ ಸ್ವಾಮಿಗಳ ಪುಣ್ಯಾರಾಧನೆ, ಪುರಾಣ ಪ್ರವಚನ ಹಾಗೂ ಶ್ರೀಮಠದ ಜಾತ್ರೆ.

Institutions

ಪೂರ್ವ / ಕಿರಿಯ ಪ್ರಾಥಮಿಕ ಶಾಲೆಗಳು
ಸಂಸ್ಕøತ / ಪದವಿ ಪೂರ್ವ ಕಾಲೇಜು
ಉಚಿತ ವಿದ್ಯಾರ್ಥಿ ನಿಲಯ - ಇಂಡಿ.

Photos

Full Address Kannada

ಶ್ರೀ ಗುರು ಗಂಗಾಧರೇಶ್ವರ ಸಂಸ್ಥಾನ ಹಿರೇಮಠ
ಶಿರಶ್ಯಾಡ - 586 217 ಇಂಡಿ
ತಾ||, ವಿಜಯಪುರ ಜಿ||

Map

Near by Places

ಚಿಕ್ಕನಾದ - 5 ಕಿ.ಮೀ.
ಅಲಮೇಲು - 15 ಕಿ.ಮೀ.
ಇಂಡಿ - 25 ಕಿ.ಮೀ.
ವಿಜಯಪುರ - 80 ಕಿ.ಮೀ.

Statistic

3 Views
0 Rating
0 Favorite
0 Share
error: Content is protected !!