ಕರ್ತೃ – ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು
ಬಸವನಬಾಗೇವಾಡಿ ತಾಲ್ಲೂಕಿನ ನಿಡಗುಂದಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀಷ.ಬ್ರ. ರುದ್ರಮುನಿ ಶಿವಾಚಾರ್ಯ ಸ್ವಾಮಿಗಳಿಂದ ಸ್ಥಾಪಿತಗೊಂಡ ಪುರಾತನವಾದ ಶ್ರೀರಂಭಾಪುರಿ ಪೀಠದ ಶಾಖಾ ಮಠವಾಗಿರುವ ಶ್ರೀ ರುದ್ರಸ್ವಾಮಿ ಮಠವು ಅಸ್ತಿತ್ವದಲ್ಲಿದ್ದು, ಈಭಾಗದಲ್ಲಿ ತನ್ನ ಕಾರ್ಯಕ್ರಮಗಳಿಂದಾಗಿ ಹೆಸರು ಮಾಡಿದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯರು ˉÉೂೀಕಸಂಚಾರಮಾಡುತ್ತಾ ಮೊದಲು ಹುನಗುಂದ ತಾಲ್ಲೂಕಿನ ಹಡಗಲಿ ಗ್ರಾಮದಲ್ಲಿ ಶ್ರೀಮಠವನ್ನು ಸ್ಥಾಪಿಸಿತದನಂತರ ನಿಡಗುಂದಿ ಗ್ರಾಮಕ್ಕೆ ಆಗಮಿಸಿ ಶ್ರೀ ಮಠವನ್ನು ಸ್ಥಾಪಿಸಿದ್ದಾರೆ ಎಂದು ತಿಳಿದುಬರುತ್ತದೆ. ಶ್ರೀಗಳು ಶ್ರೀಮಠವನ್ನು ಸ್ಥಾಪಿಸಿ ವೀರಶೈವ ಧರ್ಮಾಚರಣೆಗಳನ್ನು ಪ್ರಚುರಗೊಳಿಸುವ ಮೂಲಕ ಶ್ರೀಮಠವನ್ನು ಬೆಳೆಸಿದ್ದಾರೆ.ಶ್ರೀ ರುದ್ರಸ್ವಾಮಿ ಮಠ ಹಾಗೂ ಹಡಗಲಿಯ ಮಠಗಳು ಒಂದೇ ಗುರುಪರಂಪರೆಯಲ್ಲಿ ಬೆಳೆದು ಬಂದಿವೆ ಎಂದು ಹೇಳˉÁಗುತ್ತಿದೆ. ಕರ್ತೃಗುರುಗಳ ನಂತರದ ಪರಂಪರೆಯಲ್ಲಿ ಬಂದಿರುವ ಎˉÁ್ಲ ಶ್ರೀಗಳು ಕೂಡ ಕರ್ತೃಗುರುಗಳ ಹೆಸರಿನಿಂದˉÉೀ ಅಭಿದಾನಪಡೆದು ಶ್ರೀಮಠದ ಅಧಿಕಾರ ವಹಿಸಿಕೊಂಡಿರುವುದರಿಂದ ಗುರುಪರಂಪರೆಯನ್ನುನಿಖರವಾಗಿ ಗುರುತಿಸಲು ಆಗುವುದಿಲ್ಲ.ಈಗಿನ ಶ್ರೀಗಳಾದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳು 1974ರಲ್ಲಿಪಟ್ಟಾಧಿಕಾರವನ್ನು ವಹಿಸಿಕೊಂಡು ಶ್ರೀಮಠದ ಧಾರ್ಮಿಕ ಆಚರಣೆಗಳನ್ನು ಚುರುಕುಗೊಳಿಸಿಶ್ರೀಮಠವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಶ್ರೀಗಳುಶಿವಯೋಗ ಮಂದಿರ, ಹುಬ್ಬಳ್ಳಿ ಮತ್ತು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ನಂತರ ಶ್ರೀಮಠದಅಧಿಕಾರ ವಹಿಸಿಕೊಂಡಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮಾವಾಸ್ಯೆಯಲ್ಲಿಶಿವಾನುಭವ ಗೋಷ್ಠಿಗಳನ್ನು ನಡೆಸˉÁಗುತ್ತಿದ್ದು, ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳˉÁಗುತ್ತದೆ ಹಾಗೂ ಶ್ರೀಮಠದರಥೋತ್ಸವವು ದವನದ ಹುಣ್ಣಿಮೆ ಆದ ಐದನೇ ದಿನಕ್ಕೆ ಜರುಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1947
Place :
ಸಿದರಗಡ್ಡೆ, ಬಳ್ಳಾರಿ ತಾ||
Pattadikara :
1974
Photo :
Programs
ಪ್ರತಿ ಅಮವಾಸ್ಯೆಗೆ ಶಿವಾನುಭವ ಗೋಷ್ಠಿ.
ದವನದ ಹುಣ್ಣಿಮೆ ಆದ ಐದನೇ ದಿನಕ್ಕೆ ಶ್ರೀಮಠದ ರಥೋತ್ಸವ.
ಶ್ರಾವಣ ಮಾಸದಲ್ಲಿ ನಿತ್ಯ ಮಹಾರುದ್ರಾಭಿಷೇಕ.