ಬಸವನಬಾಗೇವಾಡಿ ತಾಲ್ಲೂಕಿನ ಮುತ್ತಗಿ ಗ್ರಾಮದ ಮಧ್ಯಭಾಗದಲ್ಲಿ ಶ್ರೀ ಷ.ಬ್ರ.ರುದ್ರಮುನಿ ಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಶ್ರೀ ರುದ್ರಸ್ವಾಮಿ ಮಠವು ಶ್ರೀ ರಂಭಾಪುರಿಪೀಠದ ಶಾಖಾಮಠವಾಗಿ ಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಿಂದಾಗಿ ಈಭಾಗದಲ್ಲಿ ಧಾರ್ಮಿಕ ವಾತಾವರಣವನ್ನು ನೆˉÉಗೊಳಿಸಿದೆ.ಕರ್ತೃಗುರುಗಳಾದ ಶ್ರೀ ರುದ್ರಮುನಿ ಸ್ವಾಮಿಗಳು ಸಂಚಾರದಲ್ಲಿದ್ದ ಸಮಯದಲ್ಲಿಮುತ್ತಗಿ ಗ್ರಾಮಕ್ಕೆ ಬಂದು ನೆˉÉಗೊಂಡವರಾಗಿದ್ದು ಕ್ರಮೇಣ ಭಕ್ತರ ಸಹಕಾರದೊಂದಿಗೆಗ್ರಾಮದಲ್ಲಿ ಮಠವನ್ನು ಸ್ಥಾಪಿಸಿದ್ದಾರೆ. ಅಂದು ಸ್ಥಾಪನೆಗೊಂಡ ಮಠವು ಈತನಕ ಬೆಳೆದುವೀರಶೈವ ಧರ್ಮವನ್ನು ಪ್ರಚುರಗೊಳಿಸುವಲ್ಲಿ ಯಶಸ್ವಿಯಾಗಿದೆ.ಶ್ರೀಮಠದ ಪೂರ್ವಜರು ಮಠದ ಪರಂಪರೆಯ ಇತಿಹಾಸವನ್ನು ದಾಖಲಿಸದೇಇರುವುದರಿಂದ ಕರ್ತೃಗುರುಗಳ ಕಾಲದ ಬಗ್ಗೆಯಾಗಲೀ ನಂತರ ಶ್ರೀಮಠದ ಅಧಿಕಾರನಡೆಸಿದ ಶ್ರೀಗಳ ಬಗ್ಗೆಯಾಗಲೀ ಯಾವುದೇ ಮಾಹಿತಿಗಳು ಲಭ್ಯವಿಲ್ಲ. ಆದ್ದರಿಂದಶ್ರೀಮಠದಲ್ಲಿ ಎಷ್ಟು ಜನ ಶ್ರೀಗಳು ಅಧಿಕಾರ ವಹಿಸಿಕೊಂಡಿದ್ದಾರೆ ಎಂಬುದು ತಿಳಿಯದಾಗಿದೆ.ಹಿಂದಿನ ಶ್ರೀಗಳಾದ ಶ್ರೀ ಷ.ಬ್ರ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿಗಳುಶ್ರೀಮಠದಲ್ಲಿ ಧಾರ್ಮಿಕ ಆಚರಣೆಗಳನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿದ್ದು1997ರಲ್ಲಿ ಲಿಂಗೈಕ್ಯರಾಗಿದ್ದಾರೆ ಎಂಬುದು ಮಾತ್ರ ತಿಳಿದುಬರುತ್ತದೆ. ಇವರ ತರುವಾಯಈಗಿನ ಶ್ರೀಗಳಾದ ಶ್ರೀ ಷ.ಬ್ರ. ವೀರರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ಶ್ರೀಮಠದಅಧಿಕಾರ ವಹಿಸಿಕೊಂಡು ಶ್ರೀಮಠವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ.1964ರಲ್ಲಿ ಜನಿಸಿದ ಶ್ರೀ ವೀರರುದ್ರಮುನಿ ಶಿವಾಚಾರ್ಯರು ಕಾಶಿಯಲ್ಲಿ ಸಂಸ್ಕøತಎಂ.ಎ., ಹಾಗೂ ಮುಂಬಯಿಯಲ್ಲಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಪಡೆದುಶ್ರೀಮಠದ ಅಧಿಕಾರ ವಹಿಸಿಕೊಂಡಿದ್ದು ತಮ್ಮ ಪಾಂಡಿತ್ಯದಿಂದ ಶ್ರೀಮಠಕ್ಕೆ ಭಕ್ತರನ್ನುಸಂಪಾದಿಸಿಕೊಂಡು ಮಠವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಮಠದ ಆವರಣದಲ್ಲಿಮೂರು ಗದ್ದುಗೆಗಳಿದ್ದು ಅವುಗಳಿಗೆ ಪ್ರತಿನಿತ್ಯ ಧಾರ್ಮಿಕ ಕಾರ್ಯಕ್ರಮಗಳೊಂದಿಗೆಚೈತ್ರಮಾಸದಲ್ಲಿ ಪುರಾಣ ಪ್ರವಚನವನ್ನು ಹಮ್ಮಿಕೊಳ್ಳˉÁಗುತ್ತದೆ.
Swamiji
Swamiji Name :
ಶ್ರೀ ಷ.ಬ್ರ. ವೀರರುದ್ರಮುನಿ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1964
Place :
ಮುತ್ತಗಿ, ಬಸವನಬಾಗೇವಾಡಿ ತಾ||
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ.
ಚೈತ್ರ ಮಾಸದಲ್ಲಿ ಏಕಾದಶಿ ತಿಥಿಯಂದು ಲಿಂ. ಶ್ರೀ ಷ.ಬ್ರ. ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ 11 ದಿನಗಳ ಕಾಲ ಪುರಾಣ ಪ್ರವಚನ ಹಾಗೂ ವಿವಿಧ ಕಾರ್ಯಕ್ರಮಗಳು. ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ, ಪೂಜೆ.