ಕರ್ತೃ – ಶ್ರೀ ಷ.ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು
ಬಸವನಬಾಗೇವಾಡಿ ತಾಲ್ಲೂಕು ಕೇಂದ್ರದಿಂದ 22 ಕಿ.ಮೀ. ದೂರದಲ್ಲಿರುವಮನಗೂಳಿ ಗ್ರಾಮದ ಮದ್ಯಭಾಗದಲ್ಲಿ ಶ್ರೀ ಷ.ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳಿಂದ ಸ್ಥಾಪಿತಗೊಂಡಿರುವ ಪುರಾತನ ಕಾಲದ ಶ್ರೀ ಪಟ್ಟ್ಟೀಕಂಥಿ ಹಿರೇಮಠವುಅಸ್ತಿತ್ವದಲ್ಲಿದ್ದು ಈ ಭಾಗದಲ್ಲಿ ಪ್ರಸಿದ್ದಿ ಪಡೆದಿದೆ. ಶ್ರೀಮಠವು ಶ್ರೀರಂಭಾಪುರಿ ಪೀಠದಶಾಖಾಮಠವಾಗಿದ್ದು ಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಕರ್ತೃಗುರುಗಳಾದ ಶ್ರೀ ಷ.ಬ್ರ. ರೇವಣಸಿದ್ದೇಶ್ವರ ಶಿವಾಚಾರ್ಯರು ಪವಾಡಪುರುಷರಾಗಿ ತಮ್ಮ ತಪೋಶಕ್ತಿಯ ಬಲದಿಂದಾಗಿ ಅನೇಕ ಸತ್ಕಾರ್ಯಗಳನ್ನು ಮಾಡಿಭಕ್ತರನ್ನು ಸನ್ಮಾರ್ಗದಲ್ಲಿ ಕೊಂಡೊಯ್ದಿದ್ದರು. ಆದರೆ ತದನಂತರದ ಪರಂಪರೆಯ ಬಗ್ಗೆಮಾಹಿತಿಗಳು ದೊರಕುವುದಿಲ್ಲ. ಈಗ್ಗೆ ಸುಮಾರು 65 ವರ್ಷಗಳ ಹಿಂದೆ ಶ್ರೀ ಮಹಾಂತೇಶ್ವರಶಿವಾಚಾರ್ಯ ಸ್ವಾಮಿಗಳು ಅಧಿಕಾರ ನಡೆಸಿರುವ ಮಾಹಿತಿ ದೊರೆಯುತ್ತದೆ.ತದನಂತರ ಶ್ರೀಮಠದ ಅಧಿಕಾರ ವಹಿಸಿಕೊಂಡ ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ.ಸಂಗನಬಸವ ಶಿವಾಚಾರ್ಯರು ಶ್ರೀಮಠದ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಶ್ರೀಮಠಕ್ಕೆ ಭವ್ಯವಾದ ಕಟ್ಟಡವನ್ನು ಕಟ್ಟಿಸಿ ಶ್ರೀಮಠಕ್ಕೆ ವೈಭವ ತಂದುಕೊಟ್ಟಿದ್ದಾರೆ.ದೀರ್ಘಕಾಲ ಶ್ರೀಮಠದ ಅಧಿಕಾರ ನಡೆಸಿದ ಶ್ರೀಗಳು ಜನಮಾನಸದಲ್ಲಿ ನೆˉÉಯೂರಿದ್ದಾರೆ.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯರು 1992ರಜುˉÉೈ 6 ರಂದು ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡಿದ್ದು ಸಮರ್ಥವಾಗಿಮುನ್ನಡೆಸುತ್ತಿದ್ದಾರೆ. ಶ್ರೀಗಳು ಸ್ನಾತಕೋತ ್ತರ ಪದವಿzs Àರರಾಗಿ ಬೆಂಗಳೂರುವಿಶ್ವವಿದ್ಯಾನಿಲಯದಲ್ಲಿ “ಶೈವಾಗಮಗಳು ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ” ಎಂಬಸಂಶೋಧನಾ ಪ್ರಬಂಧವನ್ನು ಮಂಡಿಸಿ ಪಿಹೆಚ್.ಡಿ. ಪದವಿಯನ್ನು ಪಡೆದಿದ್ದಾರೆ.ಶ್ರೀಗಳ ವಿದ್ವತ್ತನ್ನು ಗಮನಿಸಿದ ಬೆಂಗಳೂರಿನ ಶ್ರೀ ವಿಭೂತಿಪುರ ವೀರ ಸಿಂಹಾಸನಸಂಸ್ಥಾನ ಮಠದ ಹಿಂದಿನ ಗುರುಗಳಾದ ಶ್ರೀ ಸುವರ್ಣಲಿಂಗ ಶಿವಾಚಾರ್ಯ ಸ್ವಾಮಿಗಳುಶ್ರೀ ಡಾ|| ಮಹಾಂತಲಿಂಗ ಶಿವಾಚಾರ್ಯರನ್ನು 1996ರ ಮಾರ್ಚ್ 3 ರಲ್ಲಿ ಶ್ರೀ ವಿಭೂತಿಪುರಮಠಕ್ಕೆ ಪಟ್ಟಾಧ್ಯಕ್ಷರಾಗಿ ಅಧಿಕಾರಕ್ಕೆ ತಂದರು. ಪ್ರಸ್ತುತ ಶ್ರೀಗಳು ಉಭಯಮಠಗಳನ್ನುಮುನ್ನಡೆಸಿಕೊಂಡು ಬಂದಿದ್ದು ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಡಾ|| ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು
Date of Birth :
1-6-1976
Place :
ಸಂಕನಾಳ, ಬಸವನಬಾಗೇವಾಡಿ ತಾ||
Pattadikara :
6-7-1992
Photo :
Programs
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ ಮತ್ತು ವಿವಿಧ ಕಾರ್ಯಕ್ರಮಗಳು
ಆಗಿ ಹುಣ್ಣಿಮೆಗೆ ಶ್ರೀ ಹಿರಿಯ ಗುರುಗಳ ಪುಣ್ಯಾರಾಧನೆ.