ವಿಜಯಪುರ ಜಿಲ್ಲಾ ಬಸವನಬಾಗೇವಾಡಿ ತಾಲ್ಲೂಕಿನ ಬಸವನಹಟ್ಟಿ ಗ್ರಾಮವುತಾಲ್ಲೂಕು ಕೇಂದ್ರದಿಂದ 6 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದಲ್ಲಿ ಶ್ರೀ ಗುರುಪಾದೇಶ್ವರಶಿವಯೋಗಿಗಳಿಂದ ಸುಮಾರು 1960ರ ಸುಮಾರಿಗೆ ಸ್ಥಾಪಿತಗೊಂಡಿರುವ ಶ್ರೀ ಹಿರೇಮಠವುಅಸ್ತಿತ್ವದಲ್ಲಿದ್ದು ತನ್ನ ಧಾರ್ಮಿಕ ಆಚರಣೆಗಳಿಂದಾಗಿ ಗ್ರಾಮದ ಭಕ್ತರಿಗೆ ಸನ್ಮಾರ್ಗತೋರುತ್ತಿದೆ. ಶ್ರೀ ಹಿರೇಮಠವು ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿದೆ.ಶ್ರೀ ಹಿರೇಮಠದ ಕರ್ತೃಗುರುಗಳಾದ ಶ್ರೀ ಗುರುಪಾದೇಶ್ವರ ಶಿವಯೋಗಿಗಳು1933ರಲ್ಲಿ ಜನಿಸಿದವರಾಗಿದ್ದು ಬಾಲ್ಯದಿಂದˉÉೀ ಆಧ್ಯಾತ್ಮದ ಒಲವು ಹೊಂದಿದವರು.ಶ್ರೀಗಳು ಶ್ರೀಮಠವನ್ನು ಸ್ಥಾಪಿಸಿ ಗ್ರಾಮದಲ್ಲಿ ಧಾರ್ಮಿಕ ವಾತಾವರಣ ನೆˉÉಗೊಳ್ಳಲುಕಾರಣರಾದರು. ಭಕ್ತರ ಸಹಕಾರದೊಂದಿಗೆ ಶ್ರೀಮಠವನ್ನು ಅಭಿವೃದ್ಧಿಪಡಿದಿದ ಶ್ರೀಗಳುಶ್ರೀಮಠದಲ್ಲಿ ಆದಿಶಕ್ತಿ ದೇವತೆ ಪ್ರತಿಷ್ಠಾಪನೆ ಮಾಡಿ ನಿತ್ಯಪೂಜೆ ಪ್ರಾರಂಭಿಸಿದರು. ಶ್ರೀಗಳುಶ್ರೀಮಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಭಕ್ತರಿಗೆ ಸೂಕ್ತ ಮಾರ್ಗದರ್ಶನನೀಡುತ್ತಿದ್ದರು. 2010ರ ಮೇ 18ರಂದು ಶ್ರೀ ಷ.ಬ್ರ. ವೀರಗಂಗಾಧರ ಶಿವಾಚಾರ್ಯಸ್ವಾಮಿಗಳಿಗೆ ಪಟ್ಟಾಧಿಕಾರದ ಅನುಗ್ರಹ ನೀಡಿ 2013ರ ಮಾರ್ಚ್ 26ರಲ್ಲಿ ಲಿಂಗೈಕ್ಯರಾದರು.ಈಗಿನ ಶ್ರೀಗಳಾದ ಶ್ರೀ ಷ.ಬ್ರ. ವೀರಗಂಗಾಧರ ಶಿವಾಚಾರ್ಯರು ಶ್ರೀಮಠದಪಟ್ಟಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡು ಹಿರಿಯ ಗುರುಗಳ ಮಾರ್ಗದರ್ಶನದಲ್ಲಿಪರಿಪಕ್ವಗೊಂಡರು. 2010ರಲ್ಲಿ ಹಿರಿಯ ಗುರುಗಳಿಂದ ಅಧಿಕಾರ ಸ್ವೀಕರಿಸಿದ ಶ್ರೀಗಳುಗುರುಗಳ ಹಾದಿಯಲ್ಲಿಯೇ ಶ್ರೀಮಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.ಶ್ರೀಮಠದಲ್ಲಿ ಪ್ರತಿನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ನವರಾತ್ರಿಯಲ್ಲಿ ನಿತ್ಯಶ್ರೀದೇವಿ ಪುರಾಣ ಪಾರಾಯಣ, ಹೋಳಿ ಹುಣ್ಣಿಮೆಯಲ್ಲಿ ಕರ್ತೃಗುರುಗಳಾದ ಲಿಂ. ಶ್ರೀಗುರುಪಾದೇಶ್ವರ ಶಿವಯೋಗಿಗಳ ಪುಣ್ಯಾರಾಧನೆ ಹಾಗೂ ಶ್ರಾವಣದಲ್ಲಿ ಪ್ರತಿ ಸೋಮವಾರಇಷ್ಟಲಿಂಗ ಪೂಜೆಯನ್ನು ನಡೆಸಿಕೊಂಡು ಬರˉÁಗುತ್ತಿದ್ದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಪಾˉÉ್ಗೂಂಡು ಶ್ರೀಗಳ ದರ್ಶನ ಪಡೆಯುತ್ತಾರೆ.
Swamiji
Swamiji Name :
ಶ್ರೀ ಷ.ಬ್ರ. ವೀರಗಂಗಾಧರ ಶಿವಾಚಾರ್ಯ ಸ್ವಾಮಿಗಳು
Date of Birth :
1-6-1977
Place :
ಬಸವನ ಹಟ್ಟಿ, ಬಸವನಬಾಗೇವಾಡಿ ತಾ||
Pattadikara :
18-5-2010
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ. £ವ Àರಾತ್ರಿಗೆ ನಿತ್ಯ ಶ್ರೀದೇವಿ ಪುರಾಣ ಪಾರಾಯಣ.
ಶ್ರಾವಣದಲ್ಲಿ ಪ್ರತಿ ಸೋಮವಾರ ಇಷ್ಟಲಿಂಗ ಪೂಜೆ.
ಹೋಳಿ ಹುಣ್ಣಿಮೆಯಂದು ಲಿಂ. ಶ್ರೀ ಗುರುಪಾದೇಶ್ವರ ಶಿವಯೋಗಿಗಳ ಪುಣ್ಯಾರಾಧನೆ.