ಬಸವನಬಾಗೇವಾಡಿ ಪಟ್ಟಣದಲ್ಲಿ ಸುಮಾರು 10ನೇ ಶತಮಾನದˉÉ್ಲೀ ಶ್ರೀ ಪಟ್ಟದಪದ್ಮರಾಜ ಒಡೆಯರು ಸ್ಥಾಪಿಸಿದ್ದರೆಂದು ಹೇಳˉÁಗಿರುವ ಶ್ರೀ ಉಜ್ಜಯಿನಿ ಶಾಖಾ ಮಠವಾಗಿಪುತ್ರವರ್ಗದ ಪರಂಪರೆಯಲ್ಲಿ ಬೆಳೆದು ಬಂದಿರುವ ಶ್ರೀ ಹಿರೇಮಠವು ಅಸ್ತಿತ್ವದಲ್ಲಿದ್ದು ತನ್ನಧಾರ್ಮಿಕ ಆಚರಣೆಗಳಿಂದಾಗಿ ಪ್ರಸಿದ್ದಿಗೆ ಬಂದಿದೆ. ಕರ್ತೃಗುರುಗಳಾದ ಶ್ರೀ ಪಟ್ಟದಪದ್ಮರಾಜ ಒಡೆಯರು ಮಹಾನ್ ವಿದ್ವಾಂಸ ರಾಗಿದ್ದು ಅವರ ಪಾಂಡಿತ್ಯಕ್ಕೆ ಮಾರುಹೋದಅಂದಿನ ದೊರೆಗಳು ಶ್ರೀಗಳಿಗೆ “ಒಡೆಯರ್” ಎಂಬ ಬಿರುದನ್ನು ನೀಡಿ ಗೌರವಿಸಿದ್ದರೆಂದುಹೇಳˉÁಗುತ್ತದೆ. ಕತೃಗುರುಗಳ ಹೆಸರಿನಿಂದˉÉೀ ಶ್ರೀಮಠಕ್ಕೆ ಶ್ರೀ ಪಟ್ಟದ ಪದ್ಮರಾಜಒಡೆಯರ ಹಿರೇಮಠವೆಂದೂ ಸಹ ಕರೆಯˉÁಗುತ್ತದೆ.ಶ್ರೀಮಠದ ಇತಿಹಾಸವು ಅತಿ ಪ್ರಾಚೀನದ್ದೆಂದು ಹೇಳˉÁದರೂ ಕರ್ತೃಗುರುಗಳನಂತರ ಯಾವುದೇ ಗುರುಗಳು ಅಧಿಕಾರ ವಹಿಸಿಕೊಂಡ ಬಗ್ಗೆ ಮಾಹಿತಿ ಇಲ್ಲ. ಯಾವಕಾರಣಕ್ಕಾಗಿ ಶ್ರೀಮಠಕ್ಕೆ ಮಠಾಧೀಶರ ನೇಮಕವಾಗಿಲ್ಲ ಎಂಬುದಕ್ಕೆ ಸೂಕ್ತ ಕಾರಣಗಳುದೊರೆಯುವುದಿಲ್ಲ. ಆದರೆ ಕರ್ತೃಗುರುಗಳ ಗದ್ದುಗೆಯನ್ನು ಮಠದ ವಂಶಸ್ಥರೇ ಸ್ಥಾಪಿಸಿ ನಿತ್ಯಪೂಜೆ ಹಾಗೂ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಬಂದಿದ್ದು, ಧೀರ್ಘಕಾಲ ಖಾಲಿಉಳಿದ ನಂತರ ವಂಶಸ್ಥರು ಶ್ರೀ ಉಮಾಪತಿ ಪಂಡಿತಾರಾಧ್ಯ ಸ್ವಾಮಿಗಳನ್ನು ಶ್ರೀಮಠದಉತ್ತರಾಧಿಕಾರಿಗಳಾಗಿ ನೇಮಿಸಿದರು. ಆದರೆ ಶ್ರೀಗಳು ಕಾಶಿಯಲ್ಲಿ ವಿದ್ಯಾಭ್ಯಾಸದಲ್ಲಿದ್ದಸಮಯದಲ್ಲಿ ಶ್ರೀಶೈಲ ಪೀಠಕ್ಕೆ ಉತ್ತರಾಧಿಕಾರಿಗಳಾಗಿ ನೇಮಕಗೊಂಡು ಪಟ್ಟಾಧಿಕಾರಸ್ವೀಕರಿಸಿದರು. ಆದ್ದರಿಂದ ಶ್ರೀಮಠವು ಮತ್ತೊಮ್ಮೆ ಖಾಲಿ ಉಳಿಯಬೇಕಾಯಿತು.ಪ್ರಸ್ತುತ ಶ್ರೀ ಶಿವಪ್ರಕಾಶ ಶಿವಾಚಾರ್ಯರು ಶ್ರೀಮಠಕ್ಕೆ ಪಟ್ಟಾಧಿಕಾರಗೊಂಡನಂತರ ವಿದ್ಯಾಭ್ಯಾಸ ಪೂರ್ಣಗೊಳಿಸಿ ಶ್ರೀಮಠಕ್ಕೆ ಮರಳಿ, ಶ್ರೀಮಠದ ಅಭಿವೃದ್ಧಿಯಲ್ಲಿ ನಿರತರಾಗಿದ್ದಾರೆ. ಶ್ರೀಗಳು ವಾಕ್ಸಿದ್ದ ಪುರುಷರಾಗಿ ಉತ್ತಮ ಪ್ರವಚನಕಾರರಾಗಿ ತಮ್ಮ ಧಾರ್ಮಿಕಆಚರಣೆಗಳ ಮೂಲಕ ಈ ಭಾಗದ ಭಕ್ತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.ಶ್ರೀಮಠದಲ್ಲಿ ಕರ್ತೃಗುರುಗಳ ಗದ್ದುಗೆ ನಿರ್ಮಿಸˉÁಗಿದ್ದು ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕಮಾಡˉÁಗುತ್ತದೆ. ಪ್ರತಿವರ್ಷ ನವೆಂಬರ್ 26ಕ್ಕೆ ಶ್ರೀ ವೀರಭದ್ರ ಸ್ವಾಮಿ ಜಾತ್ರೆ ನಡೆಯುತ್ತದೆ.ಶ್ರೀ ಷ.ಬ್ರ. ಒಡೆಯರ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು.
Swamiji
Swamiji Name :
ಶ್ರೀ ಷ.ಬ್ರ. ಒಡೆಯರ ಶಿವಪ್ರಕಾಶ ಶಿವಾಚಾರ್ಯ ಸ್ವಾಮಿಗಳು
Date of Birth :
26-6-1982
Place :
ಬಸವನಬಾಗೇವಾಡಿ
Pattadikara :
16-04-1994
Photo :
Programs
ಪ್ರತಿ ಅಮವಾಸ್ಯೆಗೆ ರುದ್ರಾಭಿಷೇಕ. ಶಿವರಾತ್ರಿಗೆ ಶ್ರೀಗಳಿಂದ ಬಿˉÁ್ವರ್ಚನೆ ಹಾಗೂ ಇಷ್ಟಲಿಂಗ ಮಹಾಪೂಜೆ. ಶಾª್ರÀಣದಲ್ಲಿ ನಿತ್ಯ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆ. £ವ Éಂಬರ್ 26ಕ್ಕೆ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರೆ ಹಾಗೂ ಲಿಂ. ಶ್ರೀ ಷ.ಬ್ರ. ಪಟ್ಟದ ಪದ್ಮರಾಜ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ. ಕಾರ್ತೀಕ ಮಾಸದಲ್ಲಿ ನಿತ್ಯ ಕಾರ್ತಿಕೋತ್ಸವ.