ಸೇಡಂ ತಾಲ್ಲೂಕು ಕೇಂದ್ರದಿಂದ 10 ಕಿಮೀ.ದೂರದಲ್ಲಿರುವ ತೋಟ್ನಳ್ಳಿ ಗ್ರಾಮದಮಧ್ಯಭಾಗದಲ್ಲಿ ಅಸ್ತಿತ್ತ್ವದಲ್ಲಿರುವ ಶ್ರೀ ಮಹಾಂತೇಶ್ವರ ಹಿರೇಮಠವು ಶ್ರೀಮದ್ ರಂಭಾಪುರಿಪೀಠದ ಶಾಖಾಮಠವಾಗಿ ಪುತ್ರವರ್ಗದ ಪರಂಪರೆಯಲ್ಲಿ ಬೆಳೆದುಬಂದಿದೆ. ಪುರಾತನಕಾಲದ ಶ್ರೀಮಠದ ಕರ್ತೃಗುರುಗಳೆಂದು ಪೂಜ್ಯ ಶ್ರೀಮಹಾಂತೇಶ್ವರ ಶಿವಾಚಾರ್ಯರನ್ನುಗುರುತಿಸಲಾಗಿದ್ದು ಕಾಲಮಾನದ ಬಗ್ಗೆ ಸ್ಪಷ್ಟತೆಯಿಲ್ಲ.ಕರ್ತೃಗುರುಗಳ ನಂತರದ ಪರಂಪರೆಯ ಬಗ್ಗೆ ದಾಖಲೆಗಳ ಅಲಭ್ಯತೆಯಿಂದಪರಂಪರೆಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಶ್ರೀಮಠದಲ್ಲಿ ಕರ್ತೃಗುರುಗಳಗದ್ದುಗೆಯು ಕೇಂದ್ರವಾಗಿದ್ದು ಕರ್ತೃಗಳ ಗದ್ದುಗೆಯೂ ಸೇರಿದಂತೆ 5 ಗದ್ದುಗೆಗಳನ್ನುಕಾಣಬಹುದಾಗಿದೆ. ಪರಂಪರೆಯಲ್ಲಿ ಈಗ್ಗೆ ಮೂರು ತಲೆಮಾರುಗಳ ಬಗ್ಗೆ ತಿಳಿದುಬರುತ್ತಿದ್ದುಮೊದಲು ಶ್ರೀ ಷ.ಬ್ರ. ಅಂದಾನೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮಠವನ್ನುಮುನ್ನಡೆಸಿದ್ದು ಇವರ ನಂತರ ಹಿಂದಿನ ಶ್ರೀಗಳಾದ ಶ್ರೀ.ಷ.ಬ್ರ. ಗುರುಪಾದೇಶ್ವರಶಿವಾಚಾರ್ಯರು ಶ್ರೀಮಠದ ಪರಂಪರೆಯನ್ನು ಬೆಳಗಿದ್ದಾರೆ. ಇವರುಗಳು ತಮ್ಮಆಚರಣೆಗಳ ಮೂಲಕ ವೀರಶೈವ ಧರ್ಮದ ಉನ್ನತಿಗೆ ಶ್ರಮಿಸಿದ್ದು ಶ್ರೀಮಠವನ್ನು ಭಕ್ತರಸಹಕಾರದೊಂದಿಗೆ ಅಭಿವೃದ್ದಿಗೊಳಿಸಿ ಲಿಂಗೈಕ್ಯರಾದರು.ಪ್ರಸ್ತುತ ಶ್ರೀಗಳಾದ ಶ್ರೀ.ಷ.ಬ್ರ.ಡಾ. ತ್ರಿಮೂರ್ತಿ ಶಿವಾಚಾರ್ಯ ಸ್ವಾಮಿಗಳು ತಮ್ಮ12ನೇ ವಯಸ್ಸಿಗೆ ಅಂದರೆ 1997ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ಸ್ವೀಕರಿಸಿದರು.ತದನಂತರ ತಮ್ಮ ವಿಧ್ಯಾಭ್ಯಾಸ ಮುಂದುವರೆಸಿದ ಶ್ರೀಗಳು ಪ್ರೌಢ ಶಿಕ್ಷಣ ಹಾಗೂ ಆಧ್ಯಾತ್ಮ,ವೇದ, ಸಂಸ್ಕøತಗಳ ಆಳವಾದ ಅಧ್ಯಯನವನ್ನು ಬಾಳೆಹೊನ್ನೂರಿನ ಶ್ರೀ ರಂಭಾಪುರಿಪೀಠದಲ್ಲಿ ಪೂರ್ಣಗೊಳಿಸಿದರು. ಶ್ರೀಗಳು ಧಾರವಾಡದ ಬಿ.ಡಿ.ಜತ್ತಿ ಹೋಮಿಯೋಪತಿಮೆಡಿಕಲ್ ಕಾಲೇಜಿನಲ್ಲಿ ಹೋಮಿಯೋಪತಿ ವೈದ್ಯಕೀಯ (ಬಿ.ಹೆಚ್.ಎಂ.ಎಸ್.)ಪದವಿಯನ್ನು ಪಡೆದು ಶ್ರೀಮಠಕ್ಕೆ ಮರಳಿದರು. ಗುರುಗಳು ಶ್ರೀಮಠದ ಧಾರ್ಮಿಕಆಚರಣೆಗಳೊಂದಿಗೆ ಸಾಮಾಜಿಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಮಠವನ್ನುಅಭಿವೃದ್ಧಿಪಡಿಸುತ್ತಿದ್ದಾರೆ. ಸ್ವತಃ ವೈದ್ಯರೂ ಆಗಿರುವ ಶ್ರೀಗಳು ಭಕ್ತರ ಅನೇಕ ಖಾಯಿಲೆಗಳಿಗೆಆರೋಗ್ಯ ಸೇವೆ ನೀಡುತ್ತಾ ವೈದ್ಯೋತ್ತಮರೆನಿಸಿದ್ದಾರೆ.
Swamiji
Swamiji Name :
ಶ್ರೀ ಷ.ಬ್ರ. ಡಾ. ತ್ರಿಮೂರ್ತಿ ಶಿವಾಚಾರ್ಯ ಸ್ವಾಮಿಗಳು
Date of Birth :
26-03-1985
Place :
ತೋಟ್ನಳ್ಳಿ, ಸೇಡಂ ತಾ||
Pattadikara :
1997
Photo :
Programs
ಚೈತ್ರ ಮಾಸದಲ್ಲಿ ಶ್ರೀ ಮಠದ ಜಾತ್ರೆ
ಶ್ರಾವಣ ಮಾಸದಲ್ಲಿ ನಿತ್ಯ ರುದ್ರಾಭಿಷೇಕ,
ಮಹಾಪೂಜೆ
ಆಶ್ವೀಜ ಕೃಷ್ಣಪಕ್ಷ ಏಕಾದಶಿಗೆ
ಲಿಂ|| ಶ್ರೀ ಗುರುಪಾದೇಶ್ವರ ಶಿವಾಚಾರ್ಯರ
ಪುಣ್ಯಸ್ಮರಣೋತ್ಸವ
Photos
Full Address Kannada
ಶ್ರೀ ಮಹಾಂತೇಶ್ವರ ಹಿರೇಮಠ
ತೋಟ್ನಳ್ಳಿ - 585 317
ಸೇಡಂ ತಾ||, ಕಲಬುರಗಿ ಜಿಲ್ಲೆ