ಶ್ರೀ ಸದ್ಗುರು ವಿಶ್ವಾರಾಧ್ಯ ತಪೋವನ ಮಠ - ಶಕಾಪುರ (ಎಸ್.ಎ)
Average Reviews
Description
ಶ್ರೀ ಸದ್ಗುರು ವಿಶ್ವಾರಾಧ್ಯ ತಪೋವನ ಮಠ – ಶಕಾಪುರ (ಎಸ್.ಎ)
ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು
ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಶಕಾಪುರ (ಎಸ್.ಎ) ಗ್ರಾಮವುತಾಲ್ಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿದ್ದು ಈ ಗ್ರಾಮದ ಹೊರವಲಯದಲ್ಲಿಅಸ್ತಿತ್ವದಲ್ಲಿರುವ ಶ್ರೀ ಸದ್ಗುರು ವಿಶ್ವಾರಾಧ್ಯ ತಪೋವನ ಮಠವು ತನ್ನ ಧಾರ್ಮಿಕ ಸಾಮಾಜಿಕಹಾಗೂ ಶೈಕ್ಷಣಿಕ ಕಾರ್ಯಚಟುವಟಿಕೆಗಳ ಮೂಲಕ ಈ ಭಾಗದ ಪ್ರಮುಖ ಧಾರ್ಮಿಕಕೇಂದ್ರವಾಗಿ ಬೆಳೆದುಬಂದಿದೆ. ಶ್ರೀ ಮಠವು ಶ್ರೀಮದ್ ಕಾಶಿ ಪೀಠದ ಶಾಖಾಮಠವಾಗಿದ್ದುಪುತ್ರವರ್ಗದ ಪರಂಪರೆಯನ್ನು ಹೊಂದಿದೆ.ಶ್ರೀ ಸದ್ಗುರು ವಿಶ್ವಾರಾಧ್ಯರು ನಾಡು ಕಂಡ ಮಹಾಮಹಿಮರು ತಮ್ಮಅನುಷ್ಠಾನಗಳಿಂದ, ಅಪಾರ ಜ್ಞಾನ ಸಂಪತ್ತಿನಿಂದ, ಧಾರ್ಮಿಕ ಆಚರಣೆಗಳಿಂದ ಅಪಾರಭಕ್ತಬಳಗವನ್ನು ಹೊಂದಿ ಅವರನ್ನು ಸನ್ಮಾರ್ಗದಲ್ಲಿ ನಡೆಸಿದ್ದವರು. ಇಂತಹಮಹಾತಪಸ್ವಿಗಳು ಅನುಷ್ಠಾನಗೊಂಡು ಜಾಗೃತಗೊಳಿಸಿದ ಸ್ಥಳವೇ ಈಗಿನ ಶಕಾಪುರಗ್ರಾಮದಲ್ಲಿ ಶ್ರೀಮಠವಿರುವ ಸ್ಥಳ. ಶ್ರೀ ಸದ್ಗುರು ವಿಶ್ವಾರಾಧ್ಯರ ಪ್ರೇರಣೆಯಂತೆ ಶ್ರೀ.ಷ.ಬ್ರ.ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು 1997ರಲ್ಲಿ ಶ್ರೀ ಸದ್ಗುರು ಸಿದ್ದಾರಾಧ್ಯತಪೋವನ ಮಠವನ್ನು ಸ್ಥಾಪಿಸಿ ಶ್ರೀಮಠದ ಪ್ರಥಮ ಪೀಠಾಧಿಪತಿಗಳಾಗಿ ಅಧಿಕಾರಕ್ಕೆಬಂದು ಶ್ರೀಮಠವನ್ನು ಸದೃಢವಾಗಿ ಬೆಳೆಸುತ್ತಿದ್ದಾರೆ.ಶ್ರೀ ಸಿದ್ದರಾಮ ಶಿವಾಚಾರ್ಯರು ಕ್ರಿಯಾಶೀಲರಾಗಿ ತಮ್ಮ ಆಚರಣೆಗಳ ಮೂಲಕಅಪಾರ ಭಕ್ತಬಳಗವನ್ನು ಸಂಪಾದಿಸಿಕೊಂಡು ಅವರ ಸಹಕಾರದೊಂದಿಗೆ ಶ್ರೀಮಠವನ್ನುಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಶ್ರೀಮಠದ ವತಿಯಿಂದ ಶಿಕ್ಷಣ ಸಂಸ್ಥೆಯನ್ನುಹುಟ್ಟುಹಾಕಿರುವ ಶ್ರೀಗಳು ಅದರಡಿಯಲ್ಲಿ ಶಾಲೆಯನ್ನು ತೆರೆದಿದ್ದು ಜೊತೆಗೆ ಅನಾಥಾಶ್ರಮ,ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಿ ನೊಂದವರ ಆಶಾಕಿರಣರಾಗಿದ್ದಾರೆ.ಶ್ರೀಮಠದಲ್ಲಿ ನಿತ್ಯ ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಅಮವಾಸ್ಯೆಗಳಲ್ಲಿಶಿವಾನುಭವಗೋಷ್ಠಿ, ಕಾರ್ತೀಕ ಮಾಸದಲ್ಲಿ ಹಿರಿಯ ಗುರುಗಳ ಪುಣ್ಯಾರಾಧನೆ, ಎಳ್ಳುಅಮವಾಸ್ಯೆಗೆ ಶ್ರೀ ಬಸವಾಂಬ ತಾಯಿಯ ಪುಣ್ಯಾರಾಧನೆ ಕಾರ್ಯಕ್ರಮಗಳ ಜೊತೆಯಲ್ಲಿಮಾರ್ಚ್ ತಿಂಗಳಲ್ಲಿ ಶ್ರೀವಿಶ್ವಾರಾಧ್ಯರ ಮತ್ತು ಬಸವಾಂಬೆ ತಾಯಿಯವರ ಜೋಡುರಥೋತ್ಸವವನ್ನು ಜರುಗಿಸುತ್ತಿದ್ದಾರೆ. ಶ್ರೀಗಳ ಸೇವೆಯನ್ನು ಗುರುತಿಸಿ ಶ್ರೀ ರಂಭಾಪುರಿಪೀಠದಿಂದ 2012ರಲ್ಲಿ “ಗುರುಸೇವ ರತ್ನಾಕರ” ಹಾಗೂ ಶ್ರೀ ಕಾಶಿಪೀಠದಿಂದ 2014ರಲ್ಲಿ“ಶಿವಾಚಾರ್ಯ ರತ್ನ” ಬಿರುದುಗಳನ್ನು ನೀಡಿ ಗೌರವಿಸಲಾಗಿದೆ.
Swamiji
Swamiji Name :
ಶ್ರೀ ಷ.ಬ್ರ. ಸಿದ್ದರಾಮ ಶಿವಾಚಾರ್ಯ ಮಹಾಸ್ವಾಮಿಗಳು
Place :
ಶಕಾಪುರ (ಎಸ್.ಎ.), ಜೇವರ್ಗಿ ತಾ||
Photo :
Programs
ಪ್ರತಿ ಅಮವಾಸೆಗೆ “ಮಾಸಿಕ ಶಿವಾನುಭವ ಗೋಷ್ಠಿ”
ಎಳ್ಳು ಅವiವಾಸೆಗೆ ಶ್ರೀ ಬಸವಾಂಬೆ ತಾಯಿಯ ಪುಣ್ಯಾರಾಧನೆ
ಸಂಕ್ರಾಂತಿಗೆ ಭೀಮನದಿ (ಫೇಠಾ ಫಿರೋಜಾಬಾದ್) ಯಲ್ಲಿ ಶ್ರೀಗಳ ಪುಣ್ಯಸ್ನಾನ
ಮಾರ್ಚ್ನಲ್ಲಿ ಶ್ರೀ ವಿಶ್ವಾರಾಧ್ಯರ ಮತ್ತು ಬಸವಾಂಬೆ
ತಾಯಿಯವರ ಜೋಡು ರಥೋತ್ಸವ
ಶ್ರಾವಣ ಮಾಸದಲ್ಲಿ ನಿತ್ಯ ಪ್ರವಚನ
ದಸರಾದಲ್ಲಿ ಶ್ರೀದೇವಿ ಪುರಾಣ ಪಾರಾಯಣ
ಕಾರ್ತಿಕ ಮಾಸದಲ್ಲಿ ಶ್ರೀ ಹಿರಿಯ
ಗುರುಗಳ ಪುಣ್ಯಾರಾಧ£
Institutions
ಕಿರಿಯ / ಹಿರಿಯ ಪ್ರಾಥಮಿಕ / ಪ್ರೌಢ ಶಾಲೆ
ಅನಾಥಾಶ್ರಮ ವಿದ್ಯಾರ್ಥಿ ನಿಲಯ
Photos
Full Address Kannada
ಶ್ರೀ ಸದ್ಗುರು ವಿಶ್ವಾರಾಧ್ಯ ತಪೋವನ ಮಠ
ಶಕಾಪುರ (ಎಸ್.ಎ), ಹನೂರು (ಪಿ) - 585 310
ಜೇವರ್ಗಿ ತಾ||, ಕಲಬುರಗಿ ಜಿಲ್ಲೆ