Shree Halasiddeshwara Brahanmatha

Shree Halasiddeshwara Brahanmatha Claimed

ಶ್ರೀ ಹಾಲಸಿದ್ದೇಶ್ವರ ಬೃಹನ್ಮಠ, ರಾಂಪುರ

Average Reviews

Description

ಶ್ರೀ ಹಾಲಸಿದ್ದೇಶ್ವರ ಬೃಹನ್ಮಠ, ರಾಂಪುರ

ಕರ್ತೃ – ಶ್ರೀ ಹಾಲಸಿದ್ದೇಶ್ವರ ಬೃಹನ್ಮಠ

ಬಹು ಹಿಂದೆ ವೀರಶೈವ ಧರ್ಮದ ಆಚರಣೆಗಳು ಕ್ಷೀಣಿಸುತ್ತಿರುವುದನ್ನು ಮನಗಂಡ ಶ್ರೀಹಾಲಸಿದ್ದೇಶ್ವರರು, ಶ್ರೀ ಹಾಲ ಶಂಕರರು ಮತ್ತು ಶ್ರೀ ಹಾಲಸೋಮೇಶ್ವರರು ಎಂಬ ಶಿವಯೋಗಿಗಳುವೀರಶೈವ ಧರ್ಮದ ಉದ್ಧಾರಕ್ಕಾಗಿ ಮೂರು ಕಡೆ ಪ್ರಯಾಣ ಬೆಳೆಸಿದರು. ಶ್ರೀ ಹಾಲಸಿದ್ದೇಶ್ವರರುರಾಂಪುರದಲ್ಲಿ, ಶ್ರೀ ಹಾಲಶಂಕರರು ಬಸವಾಪಟ್ಟಣದಲ್ಲಿ ಮತ್ತು ಶ್ರೀ ಹಾಲಸೋಮೇಶ್ವರರುಗುಂಡೇರಿಯಲ್ಲಿ ನೆಲೆಗೊಂಡು, ವೀರಶೈವ ಧರ್ಮವನ್ನು ಬೆಳೆಸಲು ಮುಂದಾದರು.ಕಾಲಾನಂತರ ಬಸವಾಪಟ್ಟಣದಲ್ಲಿ ಜನಿಸಿದ ಹಾಲಸ್ವಾಮಿಗಳು ಈ ಮೂವರುಶಿವಯೋಗಿಗಳಿಂದ ಪ್ರಾರಂಭಗೊಂಡ ಪರಂಪರೆಯನ್ನು ಒಂದಾಗಿ ಬೆಸೆದು ಹಾಗೂ ಈ ಮೂರೂಮಠಗಳನ್ನೊಳಗೊಂಡಂತೆ ರಾಂಪುರದಲ್ಲಿ ಮಠವನ್ನು ಸ್ಥಾಪಿಸಿ, ಧರ್ಮಕಾರ್ಯವನ್ನು ಕೈಗೊಂಡುಜೀವಂತ ಸಮಾಧಿಯಾದರು. ನಂತರ 2ನೆಯ ಹಾಲಸ್ವಾಮಿಗಳು ಅಧಿಕಾರಕ್ಕೆ ಬಂದು ಕರ್ತೃಗುರುಗಳಉತ್ಸವವನ್ನು ಪ್ರಾರಂಭಿಸಿ ಧರ್ಮೋಪದೇಶ ಹಾಗೂ ಅನ್ನದಾಸೋಹ ನಡೆಯುವಂತೆ ಮಾಡಿದರು.ಈಗಿನ ಹಿರಿಯ ಗುರುಗಳಾದ ಶ್ರೀ ವಿಶ್ಯಾರಾಧ್ಯ ಶಿವಾಚಾರ್ಯ ಸ್ವಾಮಿಗಳು ರಾಂಪುರದಲ್ಲಿ1924ರಲ್ಲಿ ಜನಿಸಿದರು. ಇವರು ತಮ್ಮ 10ನೇ ವಯಸ್ಸಿನಲ್ಲಿ ಮಠದ ಉತ್ತರಾಧಿಕಾರಿಗಳಾಗಿನೇಮಕಗೊಂಡು, ಹಿರಿಯ ಗುರುಗಳ ಮಾರ್ಗದರ್ಶನದಲ್ಲಿ ಮಠದಲ್ಲೇ ಅಭ್ಯಾಸ ಮಾಡಿದರು.ಶ್ರೀಗಳು ಮುಳ್ಳುಗದ್ದುಗೆಯ ಪವಾಡವನ್ನು ಮಾಡುತ್ತಾ ಧಾರ್ಮಿಕ ಕಾರ್ಯಗಳನ್ನು ಸುವ್ಯವಸ್ಥಿತವಾಗಿನಡೆಸಿ ಮಠ ಮತ್ತು ಸಮಾಜಗಳೆರಡನ್ನೂ ಅಭಿವೃದ್ಧಿಗೊಳಿಸಿದರು. ಶ್ರೀಗಳು ಶ್ರೀಮಠದ ಜೊತೆಯಲ್ಲೇಶಾಖಾಮಠಗಳನ್ನು ಅಭಿವೃದ್ಧಿಗೊಳಿಸುತ್ತಾ ಬಂದಿದ್ದಾರೆ. ವಯೋವೃದ್ಧರಾದ ಶ್ರೀಗಳು ನಿವೃತ್ತಿಗೊಂಡುಶ್ರೀ ವಿಶ್ವೇಶ್ವರ ಶಿವಾಚಾರ್ಯ ಸ್ವಾಮಿಗಳಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ.ಶ್ರೀ ವಿಶ್ವೇಶ್ವರ ಶಿವಾಚಾರ್ಯ ಸ್ವಾಮಿಗಳು 1995ರ ಜನವರಿ 21 ರಂದು ಮಠದಅಧಿಕಾರವನ್ನು ವಹಿಸಿಕೊಂಡು ಶಾಖಾಮಠಗಳ ಅಭಿವೃದ್ಧಿಗೆ ಶ್ರಮಿಸಿದ್ದರು. ನಂತರ ಈಗಿನ ಕಿರಿಯಪಟ್ಟಾಧ್ಯಕ್ಷರಾದ ಶ್ರೀ ಷ.ಬ್ರ. ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು 1996 ರ ಡಿಸೆಂಬರ್ 25ರಲ್ಲಿಶ್ರೀಮಠದ ಅಧಿಕಾರ ವಹಿಸಿಕೊಂಡು ಧರ್ಮಜಾಗೃತಿ, ಧಾರ್ಮಿಕ ಆಚರಣೆಗಳೊಂದಿಗೆ ಸಮಾಜದಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಜೊತೆಯಲ್ಲಿ ನೂತನ ಕಟ್ಟಡಗಳನ್ನು ಕಟ್ಟಿಸಿ, ಬಡಮಕ್ಕಳಿಗಾಗಿಉಚಿತ ಪ್ರಸಾದ ನಿಲಯವನ್ನು ಸ್ಥಾಪಿಸಿ, ಭಕ್ತರ ಶ್ರೇಯಸ್ಸಿಗೆ ದಾರಿದೀಪವಾಗಿದ್ದಾರೆ.

Swamiji

Swamiji Name :
ಶ್ರೀ ಸದ್ಗುರು ಶಿವಯೋಗಿ ವಿಶ್ವಾರಾಧ್ಯ ಹಾಲಸ್ವಾಮಿಗಳು
Date of Birth :
1924
Place :
ರಾಂಪುರ, ಹೊನ್ನಾಳಿ ತಾ||
Pattadikara :
1934
Photo :
Swamiji Name :
ಶ್ರೀ ಷ.ಬ್ರ.ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮಿಗಳು
Date of Birth :
20-7-1965
Place :
ರಾಂಪುರ, ಹೊನ್ನಾಳಿ ತಾ||
Pattadikara :
25-12-1996
Photo :

Programs

ಶ್ರಾವಣ ಮಾಸದಲ್ಲಿ ನಿತ್ಯ ರುದಾಭಿಷೇಕ.
ಪ್ರತೀ ಅಮಾವಾಸ್ಯೆ ಹುಣ್ಣಿಮೆಯಂದು ಶ್ರೀಗಳ ಹೇಳಿಕೆ, ದರ್ಶನ, ಮಹಾಪ್ರಸಾದ.
ಮಾಘ ಬಹುಳ ಬಿದಿಗೆ ಶ್ರೀ ಹಾಲುಸ್ವಾಮಿಗಳ ಮುಳ್ಳುಗದ್ದಗೆ ಉತ್ಸವ,
ರಥೋತ್ಸವ. ಕಾರ್ತಿಕ ಮಾಸದಲ್ಲಿ ಹೂವಿನ ಗದ್ದುಗೆ ಉತ್ಸವ.

Institutions

ಹಾಲಸ್ವಾಮಿ ವಿದ್ಯಾಪೀಠ 1992
ಕಿರಿಯ / ಹಿರಿಯ ಪ್ರಾಥಮಿಕ ಶಾಲೆ
ಐ.ಟಿ.ಐ. ಕಾಲೇಜು, ವಿದ್ಯಾರ್ಥಿ ನಿಲಯ

Photos

Full Address Kannada

ಶ್ರೀ ಹಾಲಸಿದ್ದೇಶ್ವರ ಬೃಹನ್ಮಠ
ರಾಂಪುರ - 577 224
ಹೊನ್ನಾಳಿ ತಾ||, ದಾವಣಗೆರೆ ಜಿ||

Map

Near by Places

ರಾಂಪುರ - 500 ಮೀ.
ಹೊನ್ನಾಳಿ - 25 ಕಿ.ಮೀ.
ಹರಿಹರ - 30 ಕಿ.ಮೀ.
ದಾವಣಗೆರೆ - 45 ಕಿ.ಮೀ.

Statistic

57 Views
0 Rating
0 Favorite
0 Share
error: Content is protected !!